ಶಿರಸಿ: 18 ಶಿಕ್ಷಕರಿಗೆ ಜಿಲ್ಲಾ ಮಟ್ಟದ ‘ಉತ್ತಮ ಶಿಕ್ಷಕ’ ಗೌರವ
ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ 2021-22ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಶುಕ್ರವಾರ 18 ಜನರಿಗೆ ಘೋಷಿಸಲಾಗಿದೆ.
ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ತಲಾ 6 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ತಲಾ ₹5 ಸಾವಿರ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿರಲಿದೆ. ಸೆ.5ರಂದು ಶಿರಸಿ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲೆ ವಿಭಾಗ: ಶಿರಸಿ ತಾಲ್ಲೂಕು ತೆಪ್ಪಗಿ ಶಾಲೆಯ ನಾಗರಾಜ ವಿ.ನೀಲೆಕಣಿ, ಸಿದ್ದಾಪುರ ಸುಂಕತ್ತಿಯ ಲಲಿತಾ ಜಿ.ಹೆಗಡೆ, ಯಲ್ಲಾಪುರ ಶೀಗೆಕೇರಿಯ ನಾರಾಯಣ ಎಸ್.ಭಟ್, ಮುಂಡಗೋಡ ಗೋದ್ನಾಳದ ಲೋಕೇಶ ಜಿ.ನಾಯ್ಕ, ಹಳಿಯಾಳ ಹನೋಡಾದ ರಾಮಪ್ಪ ಸಿದ್ಧರ, ಜೋಯಿಡಾ ಕರಂಜೆಯ ಛಾಯಾ ಎಸ್.ಡೇರಿಯೆಕರ.
ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಶಿರಸಿ ಹೆಗಡೆಕಟ್ಟಾ ಶಾಲೆಯ ಸತೀಶ ಜಿ. ಹೆಗಡೆ, ಸಿದ್ದಾಪುರ ಬೇಡ್ಕಣಿಯ ಕೆ.ಪಿ. ರವಿ, ಯಲ್ಲಾಪುರ ಇಡಗುಂದಿಯ ಗಣಪತಿ ಎಚ್. ಗೌಡ, ಮುಂಡಗೋಡ ಉಮ್ಮಚಗಿಯ ಡಿ. ಅನುಪಮಾ, ಹಳಿಯಾಳ ಕೇರವಾಡದ ಶ್ರೀನುವಾಸರಾವ ಎಸ್. ನಾವಲಿ, ಜೋಯಿಡಾ ಕಾಳಸಾಯಿಯ ಶಕುಂತಲಾ ಮಾಧವ ಶಾನಭಾಗ.
ಪ್ರೌಢಶಾಲೆ ವಿಭಾಗ: ಶಿರಸಿ ಆವೆಮರಿಯಾ ಪ್ರೌಢಶಾಲೆಯ ಕಿರಣ ಫರ್ನಾಂಡಿಸ್, ಸಿದ್ದಾಪುರ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ರಾಘವೇಂದ್ರ ನಾಯ್ಕ, ಯಲ್ಲಾಪುರ ಮಲವಳ್ಳಿ ಸರ್ಕಾರಿ ಪ್ರೌಢಶಾಲೆಯ ಸಂತೋಷ ಜಿ. ಶೆಟ್ಟಿ, ಮುಂಡಗೋಡ ಅಂದಲಗಿ ಸರ್ಕಾರಿ ಪ್ರೌಢಶಾಲೆಯ ವೀರಪ್ಪ ಎಚ್. ಜಾವಳ್ಳಿ, ಹಳಿಯಾಳ ತೇರಗಾಂವ ಪ್ರೌಢಶಾಲೆಯ ಗುರುನಾಥ ಎಸ್. ಹೆಗಡೆ, ಜೋಯಿಡಾ ಬಾಪೇಲಿ ಕ್ರಾಸ್ ಸರ್ಕಾರಿ ಪ್ರೌಢಶಾಲೆಯ ಗೋವಿಂದ ಎಂ.ಅಂಬಿಗ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.