ಗ್ರಾಮಸ್ಥರಾದ ಕೃಷ್ಣ ಶೆಡೇಕರ್ ಮತ್ತು ದೇವರಾಜ ಧರಣಿ ಎಂಬುವವರು ಸಂರಕ್ಷಿತ ಅರಣ್ಯದಲ್ಲಿ ಇದ್ದುದನ್ನು ಅರಣ್ಯ ರಕ್ಷಕರಾದ ಸಂದೀಪ ಗೌಡ, ಬಸವನಗೌಡ ಪ್ರಶ್ನಿಸಿದರು. ಈ ವಿಚಾರ ಮಾತಿಗೆ ಮಾತು ಬೆಳೆದು ಬಡಿದಾಡಿಕೊಳ್ಳುವ ಹಂತಕ್ಕೆ ಹೋಯಿತು. ಗಲಾಟೆಯಲ್ಲಿ ಸಂದೀಪ ಗೌಡ ಮತ್ತು ಕೃಷ್ಣ ಶೆಡೇಕರ್ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇಬ್ಬರನ್ನು ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.