ಮಂಗಳವಾರ ಇಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಅವರು ಮಾತನಾಡಿದರು. ಜಗತ್ತಿನ ಪ್ರಥಮ ಸಂಸತ್ ಖ್ಯಾತಿಯ ಅನುಭವ ಮಂಟಪದ ದಿಗ್ಗಜರಲ್ಲಿ ಹಡಪದ ಅಪ್ಪಣ್ಣ ಕೂಡ ಒಬ್ಬರಾಗಿದ್ದರು. 12ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಮೂಢನಂಬಿಕೆ, ಶೋಷಣೆ ವಿರುದ್ಧ ಧ್ವನಿ ಎತ್ತಿದವರು ಅವರು. ಪ್ರತಿ ಜೀವಿ ಲೌಕಿಕಕ್ಕೆ ಏನನ್ನೂ ತರುವುದಿಲ್ಲ. ಎಲ್ಲವೂ ಭ್ರಮೆ. ಅಂಥ ಭ್ರಮೆ ಕಳಚಿ ಮುಕ್ತಿಯೆಡೆ ಸಾಗುವುದು ಪ್ರತಿಯೊಬ್ಬರ ಗುರಿಯಾಗಬೇಕು ಎಂದು ತಿಳಸಿದ್ದ ಅಪ್ಪಣ್ಣನವರು, ಸಾಮಾಜಿಕ ಬದಲಾವಣೆಗೆ ಕಾರಣರಾಗಿದ್ದರು ಎಂದರು.