ಆರೋಗ್ಯ ಇಲಾಖೆ ಮತ್ತು ಸಹಕಾರ ಬ್ಯಾಂಕ್ನ ಗುತ್ತಿಗೆ ಸಿಬ್ಬಂದಿ, ಬೀದಿಬದಿ ವ್ಯಾಪಾರಿಗಳು, ಟೆಂಪೊ ಹಾಗೂ ಆಟೊ ಚಾಲಕರು ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಹೀಗೆ ಹಲವರಿಗೆ ನಿತ್ಯ ಅನ್ನದಾಸೋಹ ಬಡಿಸುತ್ತಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಊಟ, ಉಪಾಹಾರಗಳು ಸಿಗುತ್ತಿರುವ ಕಾರಣ, ಕೋವಿಡ್ ಅವಧಿಯಲ್ಲಿ ಆದಾಯ ಕಳೆದುಕೊಂಡಿರುವ ವಿವಿಧ ವರ್ಗಗಳ ಜನರಿಗೆ ಅನುಕೂಲವಾಗಿದೆ.