‘ನಾಲ್ಕು ವರ್ಷಗಳ ಕೈಗಾರಿಕಾ ಒಪ್ಪಂದದ ಅವಧಿ ಮುಗಿಯುತ್ತಿದ್ದು, ಹೊಸ ಒಪ್ಪಂದವನ್ನು ಸಂಘದ ಜೊತೆ ಚರ್ಚಿಸಿ ಜಾರಿ ಮಾಡಬೇಕು. ಟೋಲ್ ಫೀ, ಡಿಸೇಲ್ ಮೇಲಿನ ಸುಂಕ ರದ್ದು ಮಾಡಬೇಕು. ನಾಲ್ಕು ನಿಗಮಗಳ ಸಾರಿಗೆ ನೌಕರರ ವೇತನವನ್ನು ಸರ್ಕಾರವೇ ಭರಿಸಬೇಕು. ಅಂತರ್ ನಿಗಮ ವರ್ಗಾವಣೆಯನ್ನು ಪುನಃ ಜಾರಿ ಮಾಡಬೇಕು. ಕಾಂಟ್ರಾಕ್ಟ್ ಅನುಮತಿ ಪಡೆದು ಅನಧಿಕೃತವಾಗಿ ಸ್ಟೇಜ್ ಕ್ಯಾರೇಜ್ ಆಗಿ ರಿವರ್ತಿಸಿ ಚಲಿಸುತ್ತಿರುವ ಖಾಸಗಿ ವಾಹನ ಹಾವಳಿ ತಪ್ಪಿಸಬೇಕು. ಹೊಸ ವೈದ್ಯಕೀಯ ಸೌಲಭ್ಯ ನೀಡಲು ಸಮಗ್ರ ಯೋಜನೆ ಜಾರಿಮಾಡಬೇಕು. ವಿಭಾಗದಲ್ಲಿ ಕಾರ್ಮಿಕರಿಗೆ ಕೊಡಬೇಕಿರುವ ಹಿಂಬಾಕಿ, ರಜಾ ನಗದೀಕರಣ ಹಣ, ನಿವೃತ್ತಿ ನೌಕರರಿಗೆ ಕೊಡತಕ್ಕ ಬಾಕಿ ಹಣ, ವೈದ್ಯಕೀಯ ಮರು ವೆಚ್ಚ ಹಣ, ಜೀವವಿಮೆ ಪ್ರೀಮಿಯಂ, ಪತ್ತಿನ ಸಹಕಾರಿ ಸಂಘದ ಒಟ್ಟು ₹ 12 ಕೋಟಿ ತಕ್ಷಣ ಕೊಡಬೇಕು. ಕರಾವಳಿ ಭಾಗಕ್ಕೆ ಹೆಚ್ಚಿನ ಡಬ್ಬಲ್ ಡೋರ್ ಬಸ್ ಪೂರೈಸಬೇಕು. ಕೊರತೆಯಿರುವ ಸಿಬ್ಬಂದಿ ನೇಮಕಾತಿ ಮಾಡಬೇಕು. ಹೊಸ ಘಟಕ ಸ್ಥಾಪಿಸುವಾಗ ಸಿಬ್ಬಂದಿ ವಸತಿ ಗೃಹ ಕಟ್ಟಿಸಬೇಕು. 25 ವರ್ಷ ಕಾರ್ಯನಿರ್ವಹಿಸಿದ ನಿರ್ವಾಹಕರಿಗೆ ವಾರ್ಷಿಕ ಬಡ್ತಿ ನೀಡುತ್ತಿದ್ದು, ಅದನ್ನು ಆಡಳಿತ ಸಿಬ್ಬಂದಿಗೂ ವಿಸ್ತರಿಸಬೇಕು ಸೇರಿದಂತೆ ವಿವಿಧ 30 ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.