‘ನನ್ನ ಓದು ನನ್ನ ಅನುಭವ’ ಗೋಷ್ಠಿ, ವಿದ್ಯಾರ್ಥಿ ಕಥಾಗೋಷ್ಠಿ, ಸಂಭಾಷಣಾ ಗೋಷ್ಠಿ, ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು. ಯಲ್ಲಾಪುರ ವೈಟಿಎಸ್ಎಸ್ ವಿದ್ಯಾರ್ಥಿನಿ ಸ್ವಾತಿ ನಾಯ್ಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಜಿಲ್ಲಾ ಸಂಚಾಲಕ ಸುಮುಖಾನಂದ ಜಲವಳ್ಳಿ, ಕಾರ್ಯದರ್ಶಿ ನಾರಾಯಣ ಹೆಗಡೆ, ಖಜಾಂಚಿ ವಿ.ಐ.ನಾಯಕ, ಪ್ರಮುಖರಾದ ಎಸ್.ಎಚ್.ಗೌಡ, ಚಂದ್ರಶೇಖರ ಪಡುವಣಿ, ಭಾರತಿ ನಲವಡೆ, ಗಂಗಾಧರ ಬಿ.ಎಸ್, ಸುರೇಶ ನಾಯ್ಕ ಇದ್ದರು. ದೇವಿದಾಸ ನಾಯಕ ಸ್ವಾಗತಿಸಿದರು. ಕಾರ್ಯದರ್ಶಿ ಗಂಗಾಧರ ನಾಯ್ಕ ನಿರೂಪಿಸಿದರು.