ಪ್ರಮುಖರಾದ ಶಿವರಾಮ ಗಾಂವಕರ ಮಾತನಾಡಿ, ‘ವಿದ್ಯುತ್ತಿಗಾಗಿ ಇಡೀ ಜಿಲ್ಲೆಯನ್ನು ಒಪ್ಪಿಸಿದ್ದರೂ, ಇಲ್ಲಿನವರಿಗೆ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ. ಲೈನ್ಮನ್, ಗ್ಯಾಂಗ್ಮನ್, ಅಧಿಕಾರಿಗಳಿಲ್ಲ ಎನ್ನುವ ಬದಲು ಜನರಿಗೆ ಕೆಲಸ ಮಾಡಿಕೊಡಬೇಕು’ ಎಂದರು. ಹೆಸ್ಕಾಂನಲ್ಲಿ ಬಿಲ್ ಸಂಗ್ರಹಿಸಲು ಜನರಿಲ್ಲ ಎನ್ನುವ ಕಾಲ ಬಂದಿದೆ. ಇದರಿಂದ ಗ್ರಾಹಕರು ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ತ್ವರಿತವಾಗಿ ಬಿಲ್ ಸಂಗ್ರಹಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು. ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ದೀಪಕ ಕಾಮತ್, ಕಿಸಾನ ಸಂಘದ ಪ್ರಸನ್ನ ಗಾಂವಕರ ಇದ್ದರು.