ಗುರುದಾಸ ಫಾಯಿದೆ ಕಾರ್ಯಕ್ರಮದ ರೂಪರೇಷೆ ಕುರಿತು ಮಾಹಿತಿ ನೀಡಿ, ಕಾನೂನು ಹೋರಾಟವನ್ನು ಕೂಡ ನಡೆಸಲಾಗುವುದು ಎಂದರು.
ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸರ್ಕಾರ ಅಣುಸ್ಥಾವರ ಕೈಬಿಟ್ಟು, ಬದಲಿ ಯೋಜನೆಗೆ ಮುಂದಾಗಬೇಕು ಎಂದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ ಗಾಂವ್ಕರ್ ಮಾತನಾಡಿ, ‘ಜಿಲ್ಲೆಯಲ್ಲಿ ಹತ್ತಾರು ಯೋಜನೆಗಳಿಗೆ ಜಾಗ ನೀಡಿರುವ ಪರಿಣಾಮ, ಈಗಾಗಲೇ 48ಸಾವಿರ ಹೆಕ್ಟೇರ್ ಅರಣ್ಯ, 23,000 ಎಕರೆ ಕೃಷಿ ಜಮೀನು ಕಳೆದುಕೊಂಡಾಗಿದೆ. ಕೈಗಾವೊಂದರಿಂದಲೇ 56,000 ಮಿಲಿಯನ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಜಿಲ್ಲೆಗೆ ವಿದ್ಯುತ್ ಇಲ್ಲ. ನಮ್ಮ ಹೋರಾಟಕ್ಕೆ ಶಾಸಕಾಂಗ-ನ್ಯಾಯಾಂಗವನ್ನು ಬಳಸಿಕೊಳ್ಳಬೇಕು’ ಎಂದರು. ಉಮೇಶ ಭಾಗವತ ಕಳಚೆ, ಪಿ.ಜಿ.ಭಟ್ಟ ಬರಗದ್ದೆ ಸಲಹೆ ನೀಡಿದರು.
ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಸ್ವಾಗತಿಸಿದರು. ವೆಂಕಟರಮಣ ಬೆಳ್ಳಿ ನಿರೂಪಿಸಿದರು. ನರಸಿಂಹ ಕೋಣೆಮನೆ ವಂದಿಸಿದರು.