ಸಮಿತಿಯ ಕಾರ್ಯದರ್ಶಿ ವಿಶ್ವನಾಥ ಹೆಗಡೆ ಮಾತನಾಡಿ, ‘ಮರಾಠಿಕೊಪ್ಪ ಭಾಗಕ್ಕೆ ಹೊಂದಿಕೊಂಡಿರುವ, ಶಿರಸಿ- ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಯಲ್ಲಾಪುರ ನಾಕಾ ಕಡೆಯಿಂದ ಹರಿದು ಬರುವ ನೀರು ಅನಾದಿ ಕಾಲದಿಂದಲೂ, ಕೊಳಚೆ ನೀರು ಸಾಗುವ ಚರಂಡಿಯಲ್ಲೇ ಹೋಗುತ್ತಿತ್ತು. ಆದರೆ, ಕೆಲ ಸ್ವ ಹಿತಾಸಕ್ತಿಗಳ ಅಡೆತಡೆಯಿಂದ ಇದಕ್ಕೆ ತಡೆಯೊಡ್ಡಲಾಗಿದೆ. ಪ್ರಸ್ತುತ ಈ ನೀರನ್ನು ಮರಾಠಿಕೊಪ್ಪ ಭಾಗಕ್ಕೆ ಬಿಡಲು, ಆಡಳಿತ ಮತ್ತೊಂದು ಕಾಲುವೆ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಹೀಗೆ ಮಾಡಿದರೆ, ಪುಟ್ಟನಮನೆಯಲ್ಲಿರುವ ಶುದ್ಧ ನೀರಿನ ಝರಿಗಳು ಹಾಳಾಗುತ್ತವೆ. ಅದಕ್ಕಾಗಿ ಯೋಜನೆ ಕೈಬಿಡಬೇಕು’ ಎಂದು ಒತ್ತಾಯಿಸಿದರು.