'ಕಟ್ಟಡದ ತಳಪಾಯ ಹಾಕಲು ಮಾಡಿದ್ದ ದೊಡ್ಡ ಹೊಂಡದಲ್ಲಿ ಮುಳ್ಳು ಹಂದಿಬಿದ್ದಿರುವುದನ್ನು ಸ್ಥಳೀಯರು ತಿಳಿಸಿದರು. ಉಪಾಯದಿಂದ ಅದನ್ನು ಮೇಲಕ್ಕೆ ಎತ್ತಲಾಯಿತು. ತಪ್ಪಿಸಿಕೊಂಡು ಮುಳ್ಳುಹಂದಿ ಮತ್ತೊಂದು ಹೊಂಡಕ್ಕೆ ಜಿಗಿಯಿತು. ಹೀಗೆ ಮೂರು ಹೊಂಡಗಳಿಗೆ ಜಿಗಿಯಿತು. ನಿರಂತರ ಎರಡೂವರೆ ತಾಸು ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿ ಹಿಡಿದು, ಪಕ್ಕದಲ್ಲಿದ್ದ ಅರಣಕ್ಕೆ ಬಿಡಲಾಯಿತು' ಎಂದು ಉರಗ ತಜ್ಞ ಪ್ರಶಾಂತ ಹುಲೇಕಲ್ ತಿಳಿಸಿದರು.