‘ಈ ಕ್ಷೇತ್ರದ ಎಲ್ಲ ಕಡೆಗೂ ಭೇಟಿ ನೀಡುತ್ತಿದ್ದು, ನನಗೆ ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಮೇಲ್ಮನೆಯು ಚಿಂತಕರ ಚಾವಡಿಯಾಗಿದ್ದು, ವಿದ್ಯಾಭ್ಯಾಸ ಇರುವಂಥ ಪ್ರಾಮಾಣಿಕರಿಗೆ ಮತ ಕೊಡುವುದಾಗಿ ಮತದಾರರು ಹೇಳುತ್ತಾರೆ. ಅದರ ಪ್ರಕಾರ ಪ್ರಥಮ ಪ್ರಾಶಸ್ತ್ಯದ ಮತವನ್ನೇ ನನಗೆ ಕೊಡುವ ಭರವಸೆಯಿದೆ. ಒಂದುವೇಳೆ ಅದು ಸಾಧ್ಯವಾಗಿದ್ದರೂ ಎರಡನೇ ಪ್ರಾಶಸ್ತ್ಯದಲ್ಲಿ ಮತ ಕೊಡಲು ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.