ರಾಮಮಂದಿರಕ್ಕಾಗಿ ನಿಧಿ ಸಮರ್ಪಣಾ ಅಭಿಯಾನವನ್ನು ಇಡೀ ದೇಶದಲ್ಲಿ ಹಮ್ಮಿಕೊಂಡಿದ್ದು, ಅದರ ಅಂಗವಾಗಿ ತಾಲ್ಲೂಕಿನಲ್ಲಿ ನಡೆಯುವ ಅಭಿಯಾನಕ್ಕಾಗಿ ಭಾನುವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಾಷ್ಟ್ರೀಯ ಪ್ರಾಣಿ– ಪಕ್ಷಿ, ಸ್ಮಾರಕದ ಹಾಗೆ ರಾಮಮಂದಿರ ರಾಷ್ಟ್ರೀಯ ದೇವಾಲಯ ಎಂದೆನಿಸಿಕೊಳ್ಳಬೇಕು ಎಂದರು.