ಸ್ವಾಮಿ ವಿವೇಕಾನಂದರ ಷಿಕಾಗೊ ಭಾಷಣದ 125ನೇ ವರ್ಷಾಚರಣೆ ಅಂಗವಾಗಿ ನಡೆಯುತ್ತಿರುವ ‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆ ಮಂಗಳವಾರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ನಾಯಕರ ಬಗ್ಗೆ ನೇರವಾಗಿ ಮಾತನಾಡುವ ಸಾಮರ್ಥ್ಯ ಇದ್ದವರು ವಿವೇಕಾನಂದರು. ಆದರೆ, ಗಾಂಧೀಜಿಗೆ ಎದುರು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಅವರು ಗೋವನ್ನು ತುಂಬಾ ಪ್ರೀತಿಸುತ್ತಿದ್ದರು ಆದರೆ, ಗೋವಿನ ಹತ್ಯೆಯನ್ನು ಧೈರ್ಯವಾಗಿ ವಿರೋಧಿಸಿ, ಬೈಯ್ಯುವ ತಾಕತ್ತನ್ನು ಇಟ್ಟುಕೊಂಡಿರಲಿಲ್ಲ. ಬ್ರಿಟಿಷರು ಮುಸಲ್ಮಾನರನ್ನು ಎತ್ತಿಕಟ್ಟುವಾಗ ಅವರನ್ನು ತಬ್ಬಿಕೊಳ್ಳುವ ಪ್ರಯತ್ನದಲ್ಲಿದ್ದರು ಗಾಂಧೀಜಿ ಎಂದರು.