ಬೆಳಿಗ್ಗೆ 6ರಿಂದ ಬಾರ್ಜ್ ಅನ್ನು ಬಿಡಲಾಗುತ್ತಿತ್ತು. ಆದರೆ ಅದರ ಸಂಚಾರ ಸ್ಥಗಿತಗೊಂಡಿದ್ದರಿಂದ ಪಟ್ಟಣಕ್ಕೆ ಆಗಮಿಸಲು ಬರುವ ಶಾಲಾ– ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರ ವಹಿವಾಟಿಗೆ ಆಗಮಿಸುವವರು ಪರಿತಪಿಸುವಂತಾಯಿತು. ಆದರೆ ಕೆಲವರು ಚಿಕ್ಕ ದೋಣಿಗಳಲ್ಲಿಯೇ ಸಂಚರಿಸಿದರು. ಗುರುವಾರ ಮಧ್ಯಾಹ್ನ ನೀರಿನ ಉಬ್ಬರದ ವೇಳೆ ಅದನ್ನು ಯಥಾಸ್ಥಿತಿಗೆ ತರಲು ಸಿಬ್ಬಂದಿ ಪ್ರಯತ್ನಿಸಿ ಯಶಸ್ವಿಯಾದ ಬಳಿಕ ಬಾರ್ಜ್ ಮತ್ತೆ ಸಂಚಾರ ಆರಂಭಿಸಿತು.