ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಪಿ.ಎಸ್.ಸದಾನಂದ ಹಾಗೂ ಅಶೋಕ ಹಾಸ್ಯಗಾರ ಅವರಿಗೆ ’ಮಾಧ್ಯಮಶ್ರೀ’ ಪ್ರಶಸ್ತಿ ಪ್ರದಾನ ಮಾಡಿ, ಅವರು ಮಾತನಾಡಿದರು. ನಕಾರಾತ್ಮಕ ಸುದ್ದಿಗಳು, ರೋಚಕ ಸುದ್ದಿಗಳು ರೋಚಕ ಸುದ್ದಿಗಳು ಕ್ಷಣಿಕ ಪ್ರಚಾರ ತಂದುಕೊಡಬಹುದು. ಆದರೆ, ಸಮಾಜಕ್ಕೆ ವಾಸ್ತವದ ಅರಿವಾದಾಗ ಅದನ್ನು ಬರೆದ ಪತ್ರಕರ್ತನ ಭವಿಷ್ಯ ಕರಾಳವಾಗಬಹುದು ಎಂದು ಕಿವಿಮಾತು ಹೇಳಿದರು.