ಕಾರವಾರದ ಅಧಿಕಾರಿಯೊಬ್ಬರಿಗೆ ನಿರಂತರವಾಗಿ ಕರೆ ಮಾಡಿ, ವಾಟ್ಸ್ಆ್ಯಪ್ ಸಂದೇಶಗಳ ಮೂಲಕ ಸಂಪರ್ಕಿಸಿ, 'ತಾವು ಅನಧಿಕೃತವಾಗಿ ಸಾಕಷ್ಟು ಹಣ ಗಳಿಸಿದ್ದೀರಿ. ಬೇನಾಮಿಯಾಗಿ ಆಸ್ತಿ ಸಂಪಾದಿಸಿದ್ದೀರಿ. ಅದರ ಬಗ್ಗೆ ನಮ್ಮ ವಾಹಿನಿಯಲ್ಲಿ ಸುದ್ದಿ ಮಾಡಿ ವೈರಲ್ ಮಾಡಬಾರದು ಎಂದಾದರೆ ₹ 50 ಲಕ್ಷ ಕೊಡಬೇಕು' ಎಂದು ಬೇಡಿಕೆ ಇಟ್ಟಿದ್ದರು.