ಕಾರವಾರ: ‘ತಾಲ್ಲೂಕಿನ ಮಾಜಾಳಿ ಸೇರಿದಂತೆ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ವೇಳೆ ಮಧ್ಯದ ಗೆರೆಯನ್ನು ಬದಲಿಸಿದ್ದಾರೆ. ಇದರಿಂದ ಹಲವರ ಮನೆಗಳ ಆವರಣ, ಗೋಡೆಗಳು ತೆರವಾಗಲಿವೆ. ಸ್ಥಳೀಯರಲ್ಲಿ ಗೊಂದಲ ಉಂಟಾಗಿದ್ದು, ಬಗೆಹರಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ಬಿ.ಜಿ.ಸಾವಂತ್ ಒತ್ತಾಯಿಸಿದ್ದಾರೆ.