‘ನಮ್ಮನ್ನು ಶಿಕ್ಷಣ ಇಲಾಖೆಯವರಾಗಲೀ ಅಕ್ಷರ ದಾಸೋಹದ ಅಧಿಕಾರಿಗಳಾಗಲೀ ಸಂಪರ್ಕಿಸಲಿಲ್ಲ. ಯಾರೂ ಅಗತ್ಯ ವಸ್ತುಗಳ ಕಿಟ್ ಕೊಡಲಿಲ್ಲ. ಏಪ್ರಿಲ್ನಲ್ಲಿ ಕೆಲವು ಶಾಲೆಗಳಲ್ಲಿ ಶಿಕ್ಷಕರ ಒತ್ತಾಯಕ್ಕಾಗಿ 11 ದಿನ ಕೆಲಸ ಮಾಡಿದ್ದೇವೆ. ಏಪ್ರಿಲ್, ಮೇನಲ್ಲಿ ನಮಗೆ ಗೌರವಧನ ಕೊಡದಿದ್ದರೆ ನೀವು ಜವಾಬ್ದಾರಿ ತೆಗೆದುಕೊಳ್ಳುತ್ತೀರಾ ಎಂದು ಕೇಳಿದ್ದೆವು. ನಮ್ಮ ವೇತನ ಬರುತ್ತದೆ ಎಂದು ಭರವಸೆ ನೀಡಿದ್ದರು. ಆದರೆ, ಗೌರವಧನವೂ ಇಲ್ಲ. ಸರ್ಕಾರದ ಪರಿಹಾರದ ಪ್ಯಾಕೇಜ್ ಕೂಡ ಇಲ್ಲ’ ಎಂದು ಅಸಮಾಧಾನ ಹೊರ ಹಾಕಿದರು.