ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಎಲ್ಲ ರೀತಿಯ ಮೀನುಗಾರಿಕೆಗಳು ಸಂಕಷ್ಟದಲ್ಲಿವೆ. ಸಮುದ್ರದಲ್ಲಿ ಬಲೆಗೆ ಬೀಳುತ್ತಿರುವ ಮೀನಿನ ಸಂಖ್ಯೆ ಬಹಳ ಕಡಿಮೆಯಾಗಿದೆ. ಯಾಂತ್ರೀಕೃತ, ನಾಡದೋಣಿ, ಪಾತಿದೋಣಿ, ಬೀಡುಬಲೆ, ಪಟ್ಟೆಬಲೆ, ಮಾಠಬಲೆ ಮತ್ತು ಏಂಡಿ ಬಲೆ ಮಾದರಿಯ ಮೀನುಗಾರಿಕೆ ಸೊರಗಿವೆ. ಇವುಗಳನ್ನು ನಂಬಿರುವ ಮೀನುಗಾರರು, ದೋಣಿಗಳಲ್ಲಿ ಕೆಲಸ ಮಾಡುವ ಕಲಾಸಿಗಳ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.