ಗೇರುಸೊಪ್ಪ ವಲಯದ ಹೆರಂಗಡಿ ಶಾಖೆಯ ತುಂಬೆಬೀಳು ಅರಣ್ಯ ಸ.ನಂ.5ರಲ್ಲಿ ಕಡಿಯಲಾಗಿದ್ದ ನಂದಿ ಹಾಗೂ ಸಾಗವಾನಿ ಮರದ ತುಂಡುಗಳ ನಾಟಾ ತಯಾರಿಸಲಾಗಿತ್ತು. ಈ ಅಕ್ರಮ ನಾಟಾವನ್ನು ಆರೋಪಿ ಸುರೇಶ ನಾಯ್ಕ ಅವರ ಮನೆ,
ಕೊಟ್ಟಿಗೆಯಲ್ಲಿ ಬಚ್ಚಿಡಲಾಗಿತ್ತು.
ಅರಣ್ಯ ಸಿಬ್ಬಂದಿ ಸತತ ಎರಡು
ದಿನಗಳ ಕಾಲ ಕಾಯಾಚರಣೆ ನಡೆಸಿದರು. ಶೋಧ ಕಾರ್ಯ ಇನ್ನೂ ಮುಂದುವರಿದಿದೆ ಎಂದು ಪ್ರೀತಿ ನಾಯ್ಕ ತಿಳಿಸಿದರು. ಆರೋಪಿ ಸುರೇಶ ನಾಯ್ಕ ಅವರಿಗೆ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ ಎಂದು ತಿಳಿದುಬಂದಿದೆ.