ರಭಸವಾಗಿ ಬೀಸಿದ ಗಾಳಿಗೆ ಕೇಣಿ ಮೂಲೆಭಾಗ ಪ್ರದೇಶದ ಪ್ರಕಾಶ ಮಾದೇವ ಹರಿಕಂತ್ರ ಎಂಬುವವರ ಮನೆ ಚಾವಣಿಯ ಶೀಟ್ಗಳು ಹಾರಿಹೋದವು. ಇದೇ ಪ್ರದೇಶದ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದ ಕಾರಣ ಉಕ್ಕಿ ಹರಿಯಿತು. ಇದರಿಂದ ಮನೆಗಳಿಗೆ ನೀರು ನುಗ್ಗಿತು. ಚರಂಡಿಯನ್ನು ಸರಿಪಡಿಸಿ ಸಮಸ್ಯೆ ಪರಿಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.