ಸಂಪೂರ್ಣ ಶಿಲಾಮಯ ಬಸದಿಯನ್ನು ಈಗಲೂ ಮೂಲಸ್ವರೂಪಕ್ಕೆ ಧಕ್ಕೆ ಬರದಂತೆ ಕಟ್ಟಲಾಗಿದೆ. ಇಲ್ಲಿ ಪುರಾತನ ಪಾರ್ಶ್ವನಾಥರ ವಿಗ್ರಹವನ್ನೇ ಮರು ಸ್ಥಾಪನೆ ಮಾಡಲಾಗಿದೆ. ನಗರದ ಹೃದಯ ಭಾಗದಲ್ಲಿರುವ ಬಸದಿಗೆ ಹೊಸ ಸ್ಪರ್ಶ ಸಿಕ್ಕಿರುವುದರಿಂದ ಇದನ್ನು ಆಧ್ಯಾತ್ಮಿಕ ತಾಣದ ಜತೆಗೆ ಪ್ರವಾಸಿ ತಾಣವಾಗಿಯೂ ರೂಪಿಸುವ ಯೋಜನೆಯಲ್ಲಿ ಜೈನ ಸಮುದಾಯವಿದೆ.