ಈ ಕಾಯಿಲೆಯ ಭಯದಿಂದ ಕೃಷಿ ಕೆಲಸಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆಗಳು ಕೂಡ ಕಂಡು ಬರುತ್ತಿವೆ. ಕೃಷಿಕರು ಅದರಲ್ಲಿಯೂ ಅಡಿಕೆ ಬೆಳೆಗಾರರಿಗೆ ಕಾಡಿನ ಸೊಪ್ಪು, ದರಕು, ಕರಡ ಅಗತ್ಯ. ಅದರೊಂದಿಗೆ ಅಡಿಕೆ ತೋಟಗಳು ಇರುವುದೇ ಕಾಡಿನ ಅಂಚಿನಲ್ಲಿ. ಈಗ ಮಂಗಗಳೂ ಕೂಡ ಈಗ ಅಡಿಕೆ ತೋಟದಲ್ಲಿರುವುದು ಮಾಮೂಲು ಸಂಗತಿಯಾಗಿದೆ. ಇದರಿಂದ ಇಡೀ ತಾಲ್ಲೂಕಿನಲ್ಲಿಯೂ ಆತಂಕ ಮನೆ ಮಾಡಿದೆ.