ನಗರದಲ್ಲಿ ಶನಿವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಲೋಕಸಭಾ ಕ್ಷೇತ್ರ ಈವರೆಗೆ ಬಿಜೆಪಿಯ ಅಧಿಕಾರದಲ್ಲಿದೆ. ಆದರೂ ಇಲ್ಲಿನ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಗಮನ ಸೆಳೆಯುವ ಕಾರ್ಯವನ್ನು ಕಾಗೇರಿ ಅವರು ಮಾಡಬೇಕು. ಇಲ್ಲಿನ ನಿರುದ್ಯೋಗ ಸಮಸ್ಯೆ, ಸಂಪರ್ಕ ತೊಡಕು, ಭೂಮಿ ಹಕ್ಕಿನ ತಾಪತ್ರಯಗಳ ಬಗ್ಗೆ ತಿಳಿವಳಿಕೆ ನೀಡಿ ಪರಿಹಾರ ಸೂಚಿಸಬೇಕು’ ಎಂದರು.