‘ನಮ್ಮ ವಿರೋಧ ದಾಖಲಿಸಲಿಲ್ಲ’:‘ಡಿಸೆಂಬರ್ನಲ್ಲಿ ಮಲ್ಲಾಪುರದಲ್ಲಿ ಆಯೋಜಿಸಲಾಗಿದ್ದಸಾರ್ವಜನಿಕ ಆಲಿಕೆ ಸಭೆಗೆ ಹೋಗದೇ ಹೊರಗಿನಿಂದಲೇ ಪ್ರತಿಭಟನೆ ಮಾಡಿದ್ದಿರಿ’ ಎಂದು ಪತ್ರಕರ್ತರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸತೀಶ ಸೈಲ್, ‘ನಮ್ಮನ್ನು ಆಹ್ವಾನಿಸಿದ್ದ ಸಂಘಟನೆಯವರು ಸಭೆಗೆ ಯಾರೂ ಹೋಗುವುದು ಬೇಡ, ಹೊರಗಿನಿಂದಲೇ ನಮ್ಮ ವಿರೋಧವ್ಯಕ್ತಪಡಿಸಬೇಕು ಎಂದಿದ್ದರು. ಅದರಂತೆ ನಾವು ಪ್ರತಿಭಟನೆ ನಡೆಸಿದ್ದೆವು. ಆದರೆ, ನಮ್ಮ ವಿರೋಧವನ್ನು ಜಿಲ್ಲಾಧಿಕಾರಿ ದಾಖಲಿಸಲಿಲ್ಲ’ ಎಂದರು.