ಮಳೆಗಾಲದ ಕೃಷಿ ಕಾರ್ಯ ಮುಗಿದ ನಂತರ ಗ್ರಾಮದ ಪುರುಷರು ಕೂಲಿ ಕೆಲಸಕ್ಕೆ ಹೋದರೆ, ಮಹಿಳೆಯರು ತಮ್ಮ ಮನೆಯ ಹಾಗೂ ಬಾಡಿಗೆ ಜಾಗದಲ್ಲಿ ಹಿರೇಕಾಯಿ, ಬೆಂಡೆಕಾಯಿ, ಸೌತೆ, ಮೊಗೆ, ಹಾಗಲ, ಪಡವಲ ಮುಂತಾದ ತರಕಾರಿ ಬೆಳೆದು ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಜೀವನಕ್ಕೆ ಆಧಾರವಾಗುತ್ತಾರೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೆ ಸಗಣಿ ಗೊಬ್ಬರ ಹಾಕಿ ಬೆಳೆಯುತ್ತಾರೆ. ಈ ತರಕಾರಿ ಇಡೀ ತಾಲ್ಲೂಕಿನಲ್ಲೇ ಪ್ರಸಿದ್ಧವಾಗಿದೆ.