‘ಕಲ್ಲೆಸೆಯುವುದು ಸರಿಯಲ್ಲ’:‘ವನ್ಯಜೀವಿಗಳ ಸಂರಕ್ಷಣೆ ನಮ್ಮ ಕರ್ತವ್ಯವಾಗಬೇಕು. ಆದರೆ, ಅವುಗಳನ್ನು ನೋಡಬೇಕು ಎಂಬ ಉತ್ಕಟ ಬಯಕೆಯಿಂದ ಅವುಗಳನ್ನು ಭಯಗೊಳಿಸುವುದು, ಕಲ್ಲೆಸೆದು ಗಾಯಗೊಳಿಸುವುದು ಸರಿಯಲ್ಲ. ಗಾಯಗೊಂಡ ಮೊಸಳೆಗಳು ಬೇಟೆಯಾಡುವ ಸಾಮರ್ಥ್ಯ ಕಳೆದುಕೊಂಡು ಸೊರಗಿ ಸಾಯುವ ಸಾಧ್ಯತೆಯಿರುತ್ತದೆ. ಕೆಲವೊಮ್ಮೆ ಅವು ತಮ್ಮ ಸುರಕ್ಷತೆಯ ದೃಷ್ಟಿಯಿಂದ ಸ್ಥಳ ಬದಲಾಯಿಸಬಹುದು. ಅವು ಹೋದ ಜಾಗದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಶುರುವಾಗಬಹುದು’ ಎನ್ನುವುದು ಮೈಸೂರಿನ ಪ್ರವಾಸಿ, ವನ್ಯಜೀವಿ ಪ್ರಿಯ ರಾಮಚಂದ್ರ ಅವರ ಅಭಿಪ್ರಾಯ.