ತಾಲ್ಲೂಕಿನ ಕೊಪ್ಪ ಗ್ರಾಮದ ಶಿವಾಜಿ ಮಹಾದೇವಪ್ಪ ಸುಣಗಾರ(ಸೈಕಲ್) ಎಂಬುವರಿಗೆ ಸೇರಿದ ಎತ್ತಿಗೆಕೆಲವು ದಿನಗಳ ಹಿಂದೆ ನಾಯಿಯೊಂದು ಕಚ್ಚಿತ್ತು ಎನ್ನಲಾಗಿದೆ. ಅದಕ್ಕಾಗಿ ಎತ್ತಿಗೆಪಶುವೈದ್ಯರಿಂದ ಒಂದು ಇಂಜೆಕ್ಷನ್ ಮಾಡಿಸಿದ್ದರು.ಆದರೆ ಎರಡು ದಿನಗಳ ಹಿಂದೆ ಎತ್ತು ಏಕಾಎಕಿ ಕೋಳಿ, ನಾಯಿ ಮತ್ತು ಜನರಿಗೆ ಹಾಯಲು ಯತ್ನಿಸಿದೆ.ಇದರಿಂದ ಆತಂಕಗೊಂಡ ಮನೆಯವರು ದನವನ್ನು ಹಿಡಿಯಲು ಮುಂದಾದಾಗ ಅವರಿಗೂ ಇರಿಯಲು ಮುಂದಾಗಿದೆ.ಪಶುವೈದ್ಯರು ಪರೀಕ್ಷಿಸಿದಾಗ ಹುಚ್ಚು ಹಿಡಿದಿರುವುದು ಗೊತ್ತಾಗಿದೆ. ನಾಲ್ಕೈದು ಹಗ್ಗಗಳಿಂದ ಹರಸಾಹಸಪಟ್ಟು ಗದ್ದೆಯಲ್ಲಿ ಕಟ್ಟಿ ಹಾಕಿದ್ದಾರೆ.