‘ಈಗಾಗಲೇ ಮರಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸರು, ಬಂದರು ಮತ್ತು ಒಳನಾಡು ಜಲಸಾರಿಗೆ, ಮೀನುಗಾರಿಕೆ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ತಾವು ನಡೆಸಿದ ಸಭೆ ನಡವಳಿಕೆಯ ಪ್ರಕಾರ ಕಾಳಿ ನದಿ, ರೈಲು ಸೇತುವೆಯಿಂದ 22 ಕಿ.ಮೀ. ದೂರದಲ್ಲಿ ಅಂದರೆ ಉಳಗಾದ ಮೇಲ್ಭಾಗದಲ್ಲಿ ಮರಳು ತೆಗೆಯಲು ಆದೇಶಿಸಲಾಗಿದೆ. ಸರ್ವೇ ನಂ.181 ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಹೀಗಾಗಿ ಅನಧಿಕೃತವಾಗಿ ನಡೆಯುವ ಚಟುವಟಿಕೆಗಳಿಗೆ ತಡೆಯೊಡ್ಡಬೇಕು’ ಎಂದು ಮನವಿ ಮಾಡಿದರು.