ಏಪ್ರಿಲ್ 18 ರಂದು ಆಕಾಶವಾಣಿ ಕಲಾವಿದೆ ಅರ್ಚನಾ ಮುಳೆ ಅವರಿಂದ ಭಕ್ತಿ ಸಂಗೀತ ಹಾಗೂ ಶ್ರೇಯಾ ಹಳ್ಳಿಕೇರಿ ಅವರಿಂದ ಸುಗಮ ಸಂಗೀತ, ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದಿಂದ ಸಾಂಸ್ಕೃತಿಕ ಕಾರ್ಯಕ್ರಮ, ರೋಣದ ಬಸವನ ಬಳಗದಿಂದ ಶ್ರೀಯಲ್ಲಮ್ಮನ ಪವಾಡ ನಡೆಯಿತು.ಏಪ್ರಿಲ್ 19 ರಂದು ಶಿವಪುರದ ಬಸ್ಸಪ್ಪ ಮಾಯನ್ನವರ ಅವರಿಂದ ಡೊಳ್ಳು ಕುಣಿತ, ಹೊನ್ನಾವರದ ಜಯದೀಪ ಪ್ರಭು ಅವರಿಂದ ಮಿಮಿಕ್ರಿ, ಕಾಶಿ ಮಂಜುನಾಥ ಮಹಾರಾಜ ಹಾಗೂ ಸುಮಾ ಹಡಪದರಿಂದ ಸುಗಮ ಸಂಗೀತ, ದುರ್ಗಾ ನಾಟ್ಯ ಕಲಾ ಸಂಘ ದಿಂದ ಶಿವ ತಾಂಡವ ನೃತ್ಯ ರೂಪಕ, ಗಣೇಶ ಬೆಳಗಾಂವಕರ ಅವರಿಂದ ಸಂಗೀತ ಕಾರ್ಯಕ್ರಮ, ದೇಮಣ್ಣಾ ಮೇತ್ರಿ ಅವರಿಂದ ಕರಡಿ ಮಜಲು, ಯಲ್ಲಪ್ಪಾ ಧಕ್ಕಣ್ಣವರ ಅವರಿಂದ ಸಿದ್ದಯನ ಆಟ, ಗುರುವಾರದಂದು ಸಿದ್ದಪ್ಪ ಬಿರಾದಾರ ಅವರಿಂದ ಗೊಂಬೆ ಯಾಟ, ಬೆಳವಟಗಿ ನಾಗರಾಜ ಕಲ್ಲಪ್ಪ ಗೌಡ ಅವರಿಂದ ಮಿಮಿಕ್ರಿ ನಡೆಯಿತು.