ಮಾಜಿ ಸಚಿವ ಆರ್.ಎನ್. ನಾಯ್ಕ ಮಾತನಾಡಿ, ‘ಸಚಿವ ಅನಂತಕುಮಾರ ಹೆಗಡೆ ಅವರ ಮೂಲಕ ಬಿಜೆಪಿ ಪಕ್ಷ ಸಂವಿಧಾನ ಬದಲಾಯಿಸುವ ವಿಷಯ ಪ್ರಸ್ತಾಪಿಸಿದೆ. ಸಂವಿಧಾನ ಬದಲಿಸುವುದರಿಂದ ಹಿಂದುಳಿದ ವರ್ಗದ ಜನರು ಮತ್ತೆ ಹಿಂದಿನ ಸ್ಥಿತಿಗೆ ಮರಳುವ ಅಪಾಯ ಇದೆ. ಸಂವಿಧಾನ ಉಳಿಸಲು ರಾಹುಲ್ ಗಾಂಧಿಗೆ ಶಕ್ತಿ ತುಂಬಬೇಕಿದೆ’ ಎಂದರು. ಜಗದೀಪ ತೆಂಗೇರಿ ಸ್ವಾಗತಿಸಿದರು. ಶಾಸಕಿ ಶಾರದಾ ಶೆಟ್ಟಿ, ಮುಖಂಡರಾದ ತಾರಾ ಗೌಡ, ಎಂ.ಎನ್. ಸುಬ್ರಹ್ಮಣ್ಯ, ರಾಜಶ್ರೀ ನಾಯ್ಕ, ವಿನೋದ ನಾಯ್ಕ ಇದ್ದರು.