ವಿಜಯನಗರ ಜಿಲ್ಲೆಯ ಕೇಂದ್ರಸ್ಥಾನ ಹೊಸಪೇಟೆ ನಗರದಲ್ಲಿ ಕಳೆದ ಏಳು ವರ್ಷಗಳಿಂದ ಸರ್ವಧರ್ಮಗಳ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ವಿಶಿಷ್ಟ ರಥೋತ್ಸವ ನಡೆಯುತ್ತ ಬಂದಿದೆ. ಸೋಮವಾರ ಸಂಜೆ ಮತ್ತೊಮ್ಮೆ ಅಂತಹ ಸಾಮರಸ್ಯದ ದೃಶ್ಯ ವೈಭವವನ್ನು ಕಾಣುವ ಅವಕಾಶ ನಗರದ ವಾಸಿಗಳಿಗೆ ಹಾಗೂ ದೂರದ ಊರುಗಳಿಂದ ಬಂದ ವಿವಿಧ ಧರ್ಮಗಳ ಅನುಯಾಯಿಗಳಿಗೆ ಲಭಿಸಿತು.