ಹೊಸಪೇಟೆ (ವಿಜಯನಗರ): ಚುನಾವಣೆ ಸಂದರ್ಭದಲ್ಲಿ ಸೂಕ್ತ ದಾಖಲೆಗಳಿಲ್ಲದ ಹಾಗೂ ಅಕ್ರಮವಾಗಿ ಸಾಗಿಸುವ ಹಣ ಜಪ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಮನ್ಯ ಕಾರ್ಯನಿರ್ವಹಣಾ ವ್ಯವಸ್ಥೆ (ಎಸ್ಒಪಿ) ಹಾಗೂ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ವಿವಿಧ ತಂಡಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಶುಕ್ರವಾರ ಇಲ್ಲಿ ನಡೆಯಿತು.
ನಗದು ಜಪ್ತಿ ಮತ್ತು ಕುಂದುಕೊರತೆ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ. ಅವರ ಅಧ್ಯಕ್ಷತೆಯಲ್ಲಿ ಈ ತರಬೇತಿ ನಡೆಯಿತು.
‘ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಚುನಾವಣೆ ಕರ್ತವ್ಯವನ್ನು ನಿರ್ವಹಿಸಬೇಕು’ ಎಂದು ಸಿಇಒ ಸೂಚಿಸಿದರು.
ಬಳ್ಳಾರಿ-09 (ಪ.ಪಂ) ಲೋಕಸಭಾ ಕ್ಷೇತ್ರದ, ಚುನಾವಣಾ ವೆಚ್ಚನಿಗಾ ಘಟಕದ ನೋಡಲ್ ಅಧಿಕಾರಿ ನಾಗರಾಜ್, ವಿಜಯನಗರ ಚುನಾವಣಾ ವೆಚ್ಚ ನೋಡಲ್ ಅಧಿಕಾರಿ ಸಿ.ಜಿ. ಶ್ರೀನಿವಾಸ್ ಇದ್ದರು.