ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ, ಕೆರೆ, ನದಿ ಸ್ವಚ್ಛತೆ, ಐದು ಜನ ಕ್ಷಯರೋಗಿಗಳನ್ನು ಗುರುತಿಸಿ ಅವರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ. ಪತ್ರಿಕಾ ವಿತರಕರ ಆರೋಗ್ಯ ತಪಾಸಣೆ, ಅಂಗವಿಕಲರ ಕೃತಕ ಕಾಲು ಜೋಡಣೆ, ಬೂತ್ ಮಟ್ಟದಲ್ಲಿ ಸಸಿ ನೆಡುವ ಕಾರ್ಯಕ್ರಮ, ಮಳೆ ನೀರು ಸಂಗ್ರಹದ ಅರಿವು, ವಿವಿಧತೆಯಲ್ಲಿ ಏಕತೆ ಹೆಸರಿನಲ್ಲಿ ಸರ್ವರನ್ನೂ ಜೋಡಿಸುವ ಕೆಲಸ ಕಾರ್ಯಕರ್ತರು ಮಾಡುವರು ಎಂದು ವಿವರಿಸಿದರು.