‘ಆಜಾದಿ ಕಾ ಅಮೃತ್ ಮಹೋತ್ಸವ’ದ ಭಾಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ದೇವಾಲಯಗಳ ತಾತ್ವಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ತಾಂತ್ರಿಕ, ವೈಜ್ಞಾನಿಕ, ಕಲೆ ಮತ್ತು ವಾಸ್ತುಶಿಲ್ಪದ ಕುರಿತು ಚರ್ಚಿಸಲಾಗುತ್ತದೆ. 30 ಜನ ವಿದ್ವಾಂಸರು ಪ್ರಬಂಧ ಕೂಡ ಮಂಡಿಸುವರು. ಇದೇ ವೇಳೆ ದೇಶದ ಪ್ರಮುಖ 75 ದೇವಸ್ಥಾನಗಳ ಕಿರು ಪರಿಚಯ ಹೊಂದಿರುವ ಪುಸ್ತಕ ಬಿಡುಗಡೆಗೊಳಿಸಲಾಗುತ್ತದೆ.