ಟ್ರಸ್ಟ್ ಸಂಚಾಲಕ ಅಬ್ದುಲ್ ಪಿಂಜಾರ ಮಾತನಾಡಿ, ವಿಶ್ವ ರಂಗಭೂಮಿ ದಿನದ ಅಂಗವಾಗಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಂಗಭೂಮಿಗೆ ನಿರ್ದಿಷ್ಟವಾದ ವ್ಯಾಪ್ತಿ, ಹರವು ಇಲ್ಲ. ಅದರ ನಾನಾ ಪ್ರಕಾರಗಳಿವೆ. ರಂಗಭೂಮಿ ಪ್ರತಿಯೊಂದರಲ್ಲೂ ಅಡಕವಾಗಿದೆ. ಮನುಷ್ಯನ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಅಂಶಗಳು ಅದರಲ್ಲಿವೆ ಎಂದು ಹೇಳಿದರು.