<p><strong>ವಿಜಯಪುರ</strong>: ‘ಹೊಸಪೇಟೆಯಿಂದ ಕೂಡಲ ಸಂಗಮದವರೆಗೆ ಪಾದಯಾತ್ರೆ ಮಾಡಿ, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಹಣ ನೀಡುತ್ತೇವೆ ಎಂದು ಹೇಳಿದ್ದ ನಾವು, ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆದಿದ್ದೇವೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.</p>.<p>ಐತಿಹಾಸಿಕ ಮಮದಾಪುರ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ‘ಈ ಭಾಗದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ರಾಮಥಾಳ ಹನಿ ನೀರಾವರಿ ಯೋಜನೆಯನ್ನು ನನ್ನ ಅವಧಿಯಲ್ಲಿಯೇ ಆರಂಭಿಸಿ, ಮುಕ್ತಾಯಗೊಳಿಸಿದ್ದೇನೆ’ ಎಂದರು.</p>.<p>‘ಹನಿ ನೀರಾವರಿಯ ಮೂಲಕ ರೈತರ ಬೆಳೆಗಳಿಗೆ ನೀರು ಕೊಟ್ಟಿದ್ದೇವೆ. ಕೆರೆ ತುಂಬುವ ಯೋಜನೆಗಳಿಗಾಗಿ ₹ 10000 ಸಾವಿರ ಕೋಟಿ ಅನುದಾನ ನೀಡಿ, ರಾಜ್ಯದಾದ್ಯಂತ 3500 ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ’ ಎಂದು ಹೇಳಿದರು.</p>.<p>‘ಕೆರೆಗಳಿಗೆ ನೀರು ತುಂಬಿಸುವುದು ಪುಣ್ಯದ ಕಾರ್ಯ, ಕೆರೆಯನ್ನು ಉಪಯೋಗಿಸುವ ಪಶು-, ಪಕ್ಷಿ, -ಪ್ರಾಣಿಗಳ ದಯೆ ನಿಮ್ಮ ಮೇಲೆ ಇರುತ್ತದೆ ಎಂದು ಈ ಹಿಂದೆ ನವದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾದ ಪೀಠಾಧೀಶರು ನನಗೆ ಹೇಳಿದ್ದರು. ಅದರಂತೆ ಒಣಗಿ ನಿಂತಿದ್ದ ಕೆರೆಗಳಿಗೆ ನೀರು ತುಂಬಿಸುವ ಮೂಲಕ, ಜೀವ ತರುವ ಕೆಲಸ ಮಾಡಿದ್ದೇವೆ’ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.</p>.<p>‘ಈ ಪ್ರದೇಶವನ್ನು ನೀರಾವರಿ ಮಾಡುವುದರ ಮೂಲಕ ನಿಮ್ಮ ಭೂಮಿಯ ಬೆಲೆಯನ್ನು ಹೆಚ್ಚಿಸಿದ್ದೇನೆ. ನಿಮ್ಮ ಮುಂದಿನ ತಲೆಮಾರುಗಳ ಅಭಿವೃದ್ಧಿಗೆ ಇಂದೇ ನಾಂದಿ ಹಾಡಿದ್ದೇನೆ. ಉಳಿದವರ ಹಾಗೆ ಭರವಸೆ ನೀಡುವುದಿಲ್ಲ. ಕಾರ್ಯ ಸಾಧನೆ ಮಾಡಿ ತೋರಿಸಿದ್ದೇನೆ. ನಾನು ನಿಮ್ಮ ಎಂ.ಬಿ.ಪಾಟೀಲ. ನಾನು ಮಾಡಿದ ಕಾರ್ಯಕ್ಕೆ ನೀವೆಲ್ಲರೂ ಈ ಬಾರಿ ಹೆಚ್ಚಿನ ಬಹುಮತ ನೀಡಿರಿ’ ಎಂದು ಮನವಿ ಮಾಡಿದರು.</p>.<p>ಆದಿಲ್ಶಾಹಿ ಅರಸರ ಕಾಲದಲ್ಲಿ ಮಮದಾಪುರ ಕೆರೆಯ ಸುತ್ತಲೂ ಬೆಳೆಯುತ್ತಿದ್ದ ಕರಿ ಭತ್ತವನ್ನು (ಡುಗ್ಗ ತಳಿ) ಮಮದಾಪುರ ವಿರಕ್ತ ಮಠದ ಅಭಿನವ ಮುರುಘೇಂದ್ರ ಸ್ವಾಮೀಜಿಗೆ ವಿತರಿಸಿದ ಸಚಿವರು, 400 ವರ್ಷಗಳ ಹಿಂದಿನ ಈ ಭತ್ತದ ತಳಿಯನ್ನು ಪುನಃ ಇಲ್ಲಿ ಬೆಳೆಯುವ ಮೂಲಕ ಇತಿಹಾಸವನ್ನು ಮರು ಸೃಷ್ಟಿಸುವ ಕಾರ್ಯಕ್ಕೆ ಚಾಲನೆ ನೀಡಿದರು.</p>.<p>ಮಮದಾಪುರ ಗ್ರಾಮಸ್ಥರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ ದಂಪತಿ ಬೆಳ್ಳಿಯ ಅಶ್ವಾರೂಢ ಬಸವೇಶ್ವರರ ವಿಗ್ರಹವನ್ನು ನೀಡಿ ಸಚಿವರನ್ನು ಸನ್ಮಾನಿಸಿದರು.</p>.<p>ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ 12ನೇ ಶತಮಾನದ ವಿವಿಧ ಶರಣರ ವೇಷಧಾರಿಗಳಾಗಿದ್ದ ತಮ್ಮ ಆಕ್ಸಫರ್ಡ್ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಬೆಳ್ಳಿ ತಟ್ಟೆಯಲ್ಲಿ ವಚನದ ಕಟ್ಟುಗಳನ್ನಿಟ್ಟು ಸಚಿವರನ್ನು ಸನ್ಮಾನಿಸಿದರು.</p>.<p>ಬಿದರಿಯ ಶಿವಲಿಂಗ ಸ್ವಾಮೀಜಿ, ಅಥಣಿಯ ಚನ್ನಬಸವ ಸ್ವಾಮೀಜಿ, ಬಾಗೇವಾಡಿಯ ಸಿದ್ಧಲಿಂಗ ಸ್ವಾಮೀಜಿ, ಷಣ್ಮುಖಾರೂಢ ಮಠದ ಅಭಿನವ ಷಣ್ಮುಖಾರೂಢರು, ಬೀಳಗಿ, ಚಿಕ್ಕಲಕಿ, ಗುಣದಾಳ ಸೇರಿದಂತೆ ವಿವಿಧ ಮಠಾಧೀಶರು ಆಶೀರ್ವಚನ ನೀಡಿದರು.</p>.<p>ಕಾರ್ಯಕ್ರಮಕ್ಕೂ ಮುನ್ನ ಮಮದಾಪುರ ಕೆರೆಯ ಸುತ್ತಲಿನ ವಿವಿಧ ಗ್ರಾಮಗಳ 10 ಸಾವಿರ ಮಹಿಳೆಯರು ಕಳಶ ಹೊತ್ತು, ಕೆರೆಗೆ ಆಗಮಿಸಿ ಬಾಗಿನ ಅರ್ಪಿಸಿ, ಗಂಗಾಪೂಜೆ ಸಲ್ಲಿಸಿದರು.</p>.<p>ಮಧ್ವರಾಜ ಕುಲಕರ್ಣಿ, ಜಿ.ಕೆ.ಗೋಟ್ಯಾಳ, ರಿಯಾಜ್ ಬಾಗವಾನ, ರವಿಗೌಡ ಪಾಟೀಲ, ರವಿಗೌಡ ಧೂಳಖೇಡ, ಹಾಸಿಂಪೀರ ವಾಲೀಕಾರ, ಕೆರೆಗೆ ನೀರು ತುಂಬಿಸುವ ಯೋಜನೆಗೆ ಲಿಂಗದಳ್ಳಿ ಜಾಕವೆಲ್ನಲ್ಲಿ ಭೂಮಿಯನ್ನು ಬಿಟ್ಟುಕೊಟ್ಟ ಗಡದಾನ, ಜಾಲಗೇರಿ, ಲಿಂಗದಳ್ಳಿ ಕುಟುಂಬದವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.</p>.<p>* * </p>.<p>ಆದಿಲ್ಶಾಹಿ ಅರಸರ ಐತಿಹಾಸಿಕ ಮಮದಾಪುರ ಕೆರೆಗೆ ಬಾಗಿನ ಅರ್ಪಿಸಿರುವುದು ನನ್ನ ಜೀವನದ ಸಂತಸದ ಕ್ಷಣಗಳಲ್ಲಿ ಒಂದು<br /> <strong>ಎಂ.ಬಿ.ಪಾಟೀಲ</strong> ಜಲಸಂಪನ್ಮೂಲ ಸಚಿವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ‘ಹೊಸಪೇಟೆಯಿಂದ ಕೂಡಲ ಸಂಗಮದವರೆಗೆ ಪಾದಯಾತ್ರೆ ಮಾಡಿ, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಹಣ ನೀಡುತ್ತೇವೆ ಎಂದು ಹೇಳಿದ್ದ ನಾವು, ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆದಿದ್ದೇವೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.</p>.<p>ಐತಿಹಾಸಿಕ ಮಮದಾಪುರ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ‘ಈ ಭಾಗದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ರಾಮಥಾಳ ಹನಿ ನೀರಾವರಿ ಯೋಜನೆಯನ್ನು ನನ್ನ ಅವಧಿಯಲ್ಲಿಯೇ ಆರಂಭಿಸಿ, ಮುಕ್ತಾಯಗೊಳಿಸಿದ್ದೇನೆ’ ಎಂದರು.</p>.<p>‘ಹನಿ ನೀರಾವರಿಯ ಮೂಲಕ ರೈತರ ಬೆಳೆಗಳಿಗೆ ನೀರು ಕೊಟ್ಟಿದ್ದೇವೆ. ಕೆರೆ ತುಂಬುವ ಯೋಜನೆಗಳಿಗಾಗಿ ₹ 10000 ಸಾವಿರ ಕೋಟಿ ಅನುದಾನ ನೀಡಿ, ರಾಜ್ಯದಾದ್ಯಂತ 3500 ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ’ ಎಂದು ಹೇಳಿದರು.</p>.<p>‘ಕೆರೆಗಳಿಗೆ ನೀರು ತುಂಬಿಸುವುದು ಪುಣ್ಯದ ಕಾರ್ಯ, ಕೆರೆಯನ್ನು ಉಪಯೋಗಿಸುವ ಪಶು-, ಪಕ್ಷಿ, -ಪ್ರಾಣಿಗಳ ದಯೆ ನಿಮ್ಮ ಮೇಲೆ ಇರುತ್ತದೆ ಎಂದು ಈ ಹಿಂದೆ ನವದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾದ ಪೀಠಾಧೀಶರು ನನಗೆ ಹೇಳಿದ್ದರು. ಅದರಂತೆ ಒಣಗಿ ನಿಂತಿದ್ದ ಕೆರೆಗಳಿಗೆ ನೀರು ತುಂಬಿಸುವ ಮೂಲಕ, ಜೀವ ತರುವ ಕೆಲಸ ಮಾಡಿದ್ದೇವೆ’ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.</p>.<p>‘ಈ ಪ್ರದೇಶವನ್ನು ನೀರಾವರಿ ಮಾಡುವುದರ ಮೂಲಕ ನಿಮ್ಮ ಭೂಮಿಯ ಬೆಲೆಯನ್ನು ಹೆಚ್ಚಿಸಿದ್ದೇನೆ. ನಿಮ್ಮ ಮುಂದಿನ ತಲೆಮಾರುಗಳ ಅಭಿವೃದ್ಧಿಗೆ ಇಂದೇ ನಾಂದಿ ಹಾಡಿದ್ದೇನೆ. ಉಳಿದವರ ಹಾಗೆ ಭರವಸೆ ನೀಡುವುದಿಲ್ಲ. ಕಾರ್ಯ ಸಾಧನೆ ಮಾಡಿ ತೋರಿಸಿದ್ದೇನೆ. ನಾನು ನಿಮ್ಮ ಎಂ.ಬಿ.ಪಾಟೀಲ. ನಾನು ಮಾಡಿದ ಕಾರ್ಯಕ್ಕೆ ನೀವೆಲ್ಲರೂ ಈ ಬಾರಿ ಹೆಚ್ಚಿನ ಬಹುಮತ ನೀಡಿರಿ’ ಎಂದು ಮನವಿ ಮಾಡಿದರು.</p>.<p>ಆದಿಲ್ಶಾಹಿ ಅರಸರ ಕಾಲದಲ್ಲಿ ಮಮದಾಪುರ ಕೆರೆಯ ಸುತ್ತಲೂ ಬೆಳೆಯುತ್ತಿದ್ದ ಕರಿ ಭತ್ತವನ್ನು (ಡುಗ್ಗ ತಳಿ) ಮಮದಾಪುರ ವಿರಕ್ತ ಮಠದ ಅಭಿನವ ಮುರುಘೇಂದ್ರ ಸ್ವಾಮೀಜಿಗೆ ವಿತರಿಸಿದ ಸಚಿವರು, 400 ವರ್ಷಗಳ ಹಿಂದಿನ ಈ ಭತ್ತದ ತಳಿಯನ್ನು ಪುನಃ ಇಲ್ಲಿ ಬೆಳೆಯುವ ಮೂಲಕ ಇತಿಹಾಸವನ್ನು ಮರು ಸೃಷ್ಟಿಸುವ ಕಾರ್ಯಕ್ಕೆ ಚಾಲನೆ ನೀಡಿದರು.</p>.<p>ಮಮದಾಪುರ ಗ್ರಾಮಸ್ಥರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ ದಂಪತಿ ಬೆಳ್ಳಿಯ ಅಶ್ವಾರೂಢ ಬಸವೇಶ್ವರರ ವಿಗ್ರಹವನ್ನು ನೀಡಿ ಸಚಿವರನ್ನು ಸನ್ಮಾನಿಸಿದರು.</p>.<p>ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ 12ನೇ ಶತಮಾನದ ವಿವಿಧ ಶರಣರ ವೇಷಧಾರಿಗಳಾಗಿದ್ದ ತಮ್ಮ ಆಕ್ಸಫರ್ಡ್ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಬೆಳ್ಳಿ ತಟ್ಟೆಯಲ್ಲಿ ವಚನದ ಕಟ್ಟುಗಳನ್ನಿಟ್ಟು ಸಚಿವರನ್ನು ಸನ್ಮಾನಿಸಿದರು.</p>.<p>ಬಿದರಿಯ ಶಿವಲಿಂಗ ಸ್ವಾಮೀಜಿ, ಅಥಣಿಯ ಚನ್ನಬಸವ ಸ್ವಾಮೀಜಿ, ಬಾಗೇವಾಡಿಯ ಸಿದ್ಧಲಿಂಗ ಸ್ವಾಮೀಜಿ, ಷಣ್ಮುಖಾರೂಢ ಮಠದ ಅಭಿನವ ಷಣ್ಮುಖಾರೂಢರು, ಬೀಳಗಿ, ಚಿಕ್ಕಲಕಿ, ಗುಣದಾಳ ಸೇರಿದಂತೆ ವಿವಿಧ ಮಠಾಧೀಶರು ಆಶೀರ್ವಚನ ನೀಡಿದರು.</p>.<p>ಕಾರ್ಯಕ್ರಮಕ್ಕೂ ಮುನ್ನ ಮಮದಾಪುರ ಕೆರೆಯ ಸುತ್ತಲಿನ ವಿವಿಧ ಗ್ರಾಮಗಳ 10 ಸಾವಿರ ಮಹಿಳೆಯರು ಕಳಶ ಹೊತ್ತು, ಕೆರೆಗೆ ಆಗಮಿಸಿ ಬಾಗಿನ ಅರ್ಪಿಸಿ, ಗಂಗಾಪೂಜೆ ಸಲ್ಲಿಸಿದರು.</p>.<p>ಮಧ್ವರಾಜ ಕುಲಕರ್ಣಿ, ಜಿ.ಕೆ.ಗೋಟ್ಯಾಳ, ರಿಯಾಜ್ ಬಾಗವಾನ, ರವಿಗೌಡ ಪಾಟೀಲ, ರವಿಗೌಡ ಧೂಳಖೇಡ, ಹಾಸಿಂಪೀರ ವಾಲೀಕಾರ, ಕೆರೆಗೆ ನೀರು ತುಂಬಿಸುವ ಯೋಜನೆಗೆ ಲಿಂಗದಳ್ಳಿ ಜಾಕವೆಲ್ನಲ್ಲಿ ಭೂಮಿಯನ್ನು ಬಿಟ್ಟುಕೊಟ್ಟ ಗಡದಾನ, ಜಾಲಗೇರಿ, ಲಿಂಗದಳ್ಳಿ ಕುಟುಂಬದವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.</p>.<p>* * </p>.<p>ಆದಿಲ್ಶಾಹಿ ಅರಸರ ಐತಿಹಾಸಿಕ ಮಮದಾಪುರ ಕೆರೆಗೆ ಬಾಗಿನ ಅರ್ಪಿಸಿರುವುದು ನನ್ನ ಜೀವನದ ಸಂತಸದ ಕ್ಷಣಗಳಲ್ಲಿ ಒಂದು<br /> <strong>ಎಂ.ಬಿ.ಪಾಟೀಲ</strong> ಜಲಸಂಪನ್ಮೂಲ ಸಚಿವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>