<p><strong>ಮುದ್ದೇಬಿಹಾಳ:</strong> ಗ್ರಾಮೀಣ ಪ್ರದೇಶದ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಸ್ವಚ್ಛಭಾರತ ಮಿಷನ್ ಯೋಜನೆಯಡಿ ಮನೆ ಮನೆಗಳಿಗೂ ವಿತರಿಸಲು ಖರೀದಿಸಲಾದ ಡಸ್ಟ್ ಬಿನ್ಗಳಿಗೇ ‘ಡಸ್ಟ್’ ಹಿಡಿದಿರುವ ಸಂಗತಿ ತಾಲ್ಲೂಕಿನ ಹಿರೇಮುರಾಳ ಗ್ರಾಮ ಪಂಚಾಯಿತಿಯಲ್ಲಿ ಬೆಳಕಿಗೆ ಬಂದಿದೆ.</p>.<p>ಜಿಲ್ಲಾ ಪಂಚಾಯಿತಿಯಿಂದ ಪೂರೈಕೆಯಾಗಿರುವ ಡಸ್ಟ್ಬಿನ್ಗಳನ್ನು ಹಿರೇಮುರಾಳ ಗ್ರಾಮ ಪಂಚಾಯಿತಿಯ ಕೆಳಗಿನ ಕೊಠಡಿಯಲ್ಲಿ ಹಾಗೂ ಪಂಚಾಯಿತಿ ಹಿಂಭಾಗದಲ್ಲಿ ಶೇಖರಿಸಿ ಇಡಲಾಗಿದ್ದು, ಧೂಳು ಹಿಡಿದಿದೆ. ಮಳೆ ಸಂದರ್ಭದಲ್ಲಿ ರಾಡಿ ನೀರೆಲ್ಲ ಇದರಲ್ಲಿ ತುಂಬಿ ವಿತರಣೆಗೂ ಮುನ್ನವೇ ಹಳೆಯದಾಗಿವೆ.</p>.<p>‘ಹಿರೇಮುರಾಳ ಗ್ರಾಮ ಪಂಚಾಯಿತಿಯು ಅರಸನಾಳ, ನೆರಬೆಂಚಿ, ಹಿರೇಮುರಾಳ, ಆರೇಮುರಾಳ, ಗೋನಾಳ ಎಸ್.ಎಚ್., ವಣಕ್ಯಾಳ, ಜಂಗಮುರಾಳ ಗ್ರಾಮಗಳನ್ನು ಒಳಗೊಂಡಿದೆ. ಹಿರೇಮುರಾಳ ಹಾಗೂ ಆರೇಮುರಾಳ ಗ್ರಾಮಗಳನ್ನು ಹೊರತುಪಡಿಸಿ ಇನ್ನುಳಿದ ಗ್ರಾಮಗಳಿಗೆ ಡಸ್ಟ್ಬಿನ್ಗಳನ್ನು ವಿತರಿಸಲಾಗಿದೆ. ಸದ್ಯ ಇರುವ 260 ಡಸ್ಟ್ಬಿನ್ಗಳು ಎರಡೂ ಗ್ರಾಮಗಳಿಗೆ ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಡಸ್ಟ್ಬಿನ್ಗಳನ್ನು ಖರೀದಿಸಿ ಎರಡೂ ಗ್ರಾಮಗಳಿಗೆ ಹಂಚಬೇಕಾಗಿದೆ. ಹೀಗಾಗಿ ಗ್ರಾಮ ಪಂಚಾಯ್ತಿಯಲ್ಲಿ ಕೆಲವು ಡಸ್ಟ್ಬಿನ್ಗಳನ್ನು ಶೇಖರಿಸಿ ಇಡಲಾಗಿದೆ’ ಎನ್ನುವುದು ಗ್ರಾಮ ಪಂಚಾಯ್ತಿ ಅಧಿಕಾರಿಗಳ ಮಾತು.</p>.<p>ಪ್ರತಿ ಕುಟುಂಬದ ಸದಸ್ಯರಿಗೆ ತಲಾ ಎರಡು ಡಬ್ಬಗಳನ್ನು ಕೊಡಲಾಗುತ್ತಿದೆ. ಅದರಲ್ಲಿ ಹಸಿ ಕಸ, ಒಣ ಕಸ ಎಂದು ವಿಂಗಡಿಸಿ, ಪಂಚಾಯಿತಿಯಿಂದ ಕಸ ಸಂಗ್ರಹಕ್ಕೆ ಬರುವ ವಾಹನಕ್ಕೆ ಕೊಡಬೇಕು. ಕೆಲವೆಡೆ ಇದು ಸಮರ್ಪಕ ಅನುಷ್ಠಾನವಾದರೆ, ಆದರೆ ಮತ್ತೆ ಕೆಲವಡೆ ಡಬ್ಬಗಳಿಗೆ ಧೂಳು ಮೆತ್ತಿಕೊಂಡಿವೆ.</p>.<p>‘ಡಸ್ಟ್ಬಿನ್ಗಳನ್ನು ಜಿಲ್ಲಾ ಪಂಚಾಯಿತಿಯಿಂದಲೇ ನೇರವಾಗಿ ಖರೀದಿಸಿಕೊಡಲಾಗಿದ್ದು ₹3 ಲಕ್ಷ ವರೆಗೂ ವೆಚ್ಚವಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಡಸ್ಟ್ಬಿನ್ಗಳು ಜನರ ಕೈಗೆ ಸಿಗದೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿಯೇ ಧೂಳು ಹಿಡಿಯುತ್ತಿವೆ’ ಎನ್ನುತ್ತಾರೆ ಸಾರ್ವಜನಿಕರು.</p>.<div><blockquote>ಹಿರೇಮುರಾಳ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಡಸ್ಟ್ಬಿನ್ಗಳ ವಿತರಣೆಗೆ ಅಧಿಕಾರಿಗಳು ಮುಂದಾಗಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು </blockquote><span class="attribution">ಬಿ.ಬಿ.ಪಾಟೀಲ್, ಹಿರೇಮುರಾಳ ಗ್ರಾಮದ ಮುಖಂಡರು</span></div>.<div><blockquote>ಹಿರೇಮುರಾಳ ಹಾಗೂ ಆರೇಮುರಾಳ ಗ್ರಾಮಗಳಿಗೆ ಏಕಕಾಲಕ್ಕೆ ಡಸ್ಟ್ಬಿನ್ ವಿತರಿಸಲು ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ. ವಾರದೊಳಗೆ ಸಭೆ ನಡೆಸಿ ವಿತರಣೆಗೆ ಕ್ರಮವಹಿಸಲಾಗುವುದು.</blockquote><span class="attribution">ಕಲ್ಮೇಶ ಕುಂಬಾರ, ಹಿರೇಮುರಾಳ ಪಿಡಿಒ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದ್ದೇಬಿಹಾಳ:</strong> ಗ್ರಾಮೀಣ ಪ್ರದೇಶದ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಸ್ವಚ್ಛಭಾರತ ಮಿಷನ್ ಯೋಜನೆಯಡಿ ಮನೆ ಮನೆಗಳಿಗೂ ವಿತರಿಸಲು ಖರೀದಿಸಲಾದ ಡಸ್ಟ್ ಬಿನ್ಗಳಿಗೇ ‘ಡಸ್ಟ್’ ಹಿಡಿದಿರುವ ಸಂಗತಿ ತಾಲ್ಲೂಕಿನ ಹಿರೇಮುರಾಳ ಗ್ರಾಮ ಪಂಚಾಯಿತಿಯಲ್ಲಿ ಬೆಳಕಿಗೆ ಬಂದಿದೆ.</p>.<p>ಜಿಲ್ಲಾ ಪಂಚಾಯಿತಿಯಿಂದ ಪೂರೈಕೆಯಾಗಿರುವ ಡಸ್ಟ್ಬಿನ್ಗಳನ್ನು ಹಿರೇಮುರಾಳ ಗ್ರಾಮ ಪಂಚಾಯಿತಿಯ ಕೆಳಗಿನ ಕೊಠಡಿಯಲ್ಲಿ ಹಾಗೂ ಪಂಚಾಯಿತಿ ಹಿಂಭಾಗದಲ್ಲಿ ಶೇಖರಿಸಿ ಇಡಲಾಗಿದ್ದು, ಧೂಳು ಹಿಡಿದಿದೆ. ಮಳೆ ಸಂದರ್ಭದಲ್ಲಿ ರಾಡಿ ನೀರೆಲ್ಲ ಇದರಲ್ಲಿ ತುಂಬಿ ವಿತರಣೆಗೂ ಮುನ್ನವೇ ಹಳೆಯದಾಗಿವೆ.</p>.<p>‘ಹಿರೇಮುರಾಳ ಗ್ರಾಮ ಪಂಚಾಯಿತಿಯು ಅರಸನಾಳ, ನೆರಬೆಂಚಿ, ಹಿರೇಮುರಾಳ, ಆರೇಮುರಾಳ, ಗೋನಾಳ ಎಸ್.ಎಚ್., ವಣಕ್ಯಾಳ, ಜಂಗಮುರಾಳ ಗ್ರಾಮಗಳನ್ನು ಒಳಗೊಂಡಿದೆ. ಹಿರೇಮುರಾಳ ಹಾಗೂ ಆರೇಮುರಾಳ ಗ್ರಾಮಗಳನ್ನು ಹೊರತುಪಡಿಸಿ ಇನ್ನುಳಿದ ಗ್ರಾಮಗಳಿಗೆ ಡಸ್ಟ್ಬಿನ್ಗಳನ್ನು ವಿತರಿಸಲಾಗಿದೆ. ಸದ್ಯ ಇರುವ 260 ಡಸ್ಟ್ಬಿನ್ಗಳು ಎರಡೂ ಗ್ರಾಮಗಳಿಗೆ ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಡಸ್ಟ್ಬಿನ್ಗಳನ್ನು ಖರೀದಿಸಿ ಎರಡೂ ಗ್ರಾಮಗಳಿಗೆ ಹಂಚಬೇಕಾಗಿದೆ. ಹೀಗಾಗಿ ಗ್ರಾಮ ಪಂಚಾಯ್ತಿಯಲ್ಲಿ ಕೆಲವು ಡಸ್ಟ್ಬಿನ್ಗಳನ್ನು ಶೇಖರಿಸಿ ಇಡಲಾಗಿದೆ’ ಎನ್ನುವುದು ಗ್ರಾಮ ಪಂಚಾಯ್ತಿ ಅಧಿಕಾರಿಗಳ ಮಾತು.</p>.<p>ಪ್ರತಿ ಕುಟುಂಬದ ಸದಸ್ಯರಿಗೆ ತಲಾ ಎರಡು ಡಬ್ಬಗಳನ್ನು ಕೊಡಲಾಗುತ್ತಿದೆ. ಅದರಲ್ಲಿ ಹಸಿ ಕಸ, ಒಣ ಕಸ ಎಂದು ವಿಂಗಡಿಸಿ, ಪಂಚಾಯಿತಿಯಿಂದ ಕಸ ಸಂಗ್ರಹಕ್ಕೆ ಬರುವ ವಾಹನಕ್ಕೆ ಕೊಡಬೇಕು. ಕೆಲವೆಡೆ ಇದು ಸಮರ್ಪಕ ಅನುಷ್ಠಾನವಾದರೆ, ಆದರೆ ಮತ್ತೆ ಕೆಲವಡೆ ಡಬ್ಬಗಳಿಗೆ ಧೂಳು ಮೆತ್ತಿಕೊಂಡಿವೆ.</p>.<p>‘ಡಸ್ಟ್ಬಿನ್ಗಳನ್ನು ಜಿಲ್ಲಾ ಪಂಚಾಯಿತಿಯಿಂದಲೇ ನೇರವಾಗಿ ಖರೀದಿಸಿಕೊಡಲಾಗಿದ್ದು ₹3 ಲಕ್ಷ ವರೆಗೂ ವೆಚ್ಚವಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಡಸ್ಟ್ಬಿನ್ಗಳು ಜನರ ಕೈಗೆ ಸಿಗದೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿಯೇ ಧೂಳು ಹಿಡಿಯುತ್ತಿವೆ’ ಎನ್ನುತ್ತಾರೆ ಸಾರ್ವಜನಿಕರು.</p>.<div><blockquote>ಹಿರೇಮುರಾಳ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಡಸ್ಟ್ಬಿನ್ಗಳ ವಿತರಣೆಗೆ ಅಧಿಕಾರಿಗಳು ಮುಂದಾಗಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು </blockquote><span class="attribution">ಬಿ.ಬಿ.ಪಾಟೀಲ್, ಹಿರೇಮುರಾಳ ಗ್ರಾಮದ ಮುಖಂಡರು</span></div>.<div><blockquote>ಹಿರೇಮುರಾಳ ಹಾಗೂ ಆರೇಮುರಾಳ ಗ್ರಾಮಗಳಿಗೆ ಏಕಕಾಲಕ್ಕೆ ಡಸ್ಟ್ಬಿನ್ ವಿತರಿಸಲು ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ. ವಾರದೊಳಗೆ ಸಭೆ ನಡೆಸಿ ವಿತರಣೆಗೆ ಕ್ರಮವಹಿಸಲಾಗುವುದು.</blockquote><span class="attribution">ಕಲ್ಮೇಶ ಕುಂಬಾರ, ಹಿರೇಮುರಾಳ ಪಿಡಿಒ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>