<p>ವಿಜಯಪುರ: ಇಂದಿನ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಒಂದು ಪದವಿ ಅಥವಾ ಒಂದು ಕೋರ್ಸ್ ಮುಗಿಸಿದರೆ ಸಾಲುವುದಿಲ್ಲ. ಕಾಲಮಾನದ ಅಪೇಕ್ಷೆಯಂತೆ ವೃತ್ತಿ ಕೌಶಲ ಪರಿಣಿತಿ ಹೊಂದಿದರೆ ಸುಲಭವಾಗಿ ಉದ್ಯೋಗಾವಕಾಶ ಪಡೆಯಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ ಹೇಳಿದರು.</p>.<p>ನಗರದ ಬಿ.ಎಲ್.ಡಿ.ಇ.ಎ ಎಸ್.ಎಸ್.ಎಂ. ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.</p>.<p>ನಮ್ಮ ಜಿಲ್ಲೆಯಲ್ಲಿ ಈವರೆಗೆ ಕೌಶಲಾಧಾರಿತ ಸಿಎಂಕೆಕೆವೈ ಮತ್ತು ಪಿಎಂಕೆವಿವೈ ಯೋಜನೆಗಳಲ್ಲಿ ವಿವಿಧ ವಲಯ ಮತ್ತು ಜಾಬ್ ರೋಲ್ಗಳಲ್ಲಿ 4500ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗ ದೊರಕಿಸಿಕೊಳ್ಳಲು ಸಹಾಯ ಹಸ್ತ ಚಾಚಲಾಗಿದೆ ಎಂದರು.</p>.<p>ಜಗತ್ತಿನಾದ್ಯಂತ ವೈಟ್ ಕಾಲರ್ ಜಾಬ್ಗಿಂತಲೂ ಕೌಶಲಾಧರಿತ ಬ್ಲ್ಯೂ ಕಾಲರ್ ಜಾಬ್ಗಳು ಹೆಚ್ಚು ಸೃಷ್ಟಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಯುವಸಮೂಹ ಯಾವುದೇ ಉದ್ಯೋಗ ಸಿಕ್ಕರೂ ಕೆಲಸ ಮಾಡಲು ಸಿದ್ಧರಾಗಿ, ವೃತ್ತಿ ನೈಪುಣ್ಯತೆ ಪಡೆದುಕೊಂಡು ಮುಂದಿನ ದಿನಗಳಲ್ಲಿ ಉನ್ನತ ಉದ್ಯೋಗ ಹೊಂದಲು ಈ ವೇದಿಕೆ ನೆರವಾಗುತ್ತದೆ ಎಂದು ಅವರು ಹೇಳಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್, ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿಯು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಯುವ ಜನರ ಆಶಾ ಕಿರಣವಾಗಿದೆ. ಈಗಾಗಲೇ ಹಲವಾರು ತರಬೇತಿ ಕೇಂದ್ರಗಳು ನೋಂದಣಿಯಾಗಿದ್ದು, ವಿವಿಧ ಜಾಬ್ ರೋಲ್ಗಳಲ್ಲಿ ತರಬೇತಿಗಳನ್ನು ನೀಡುತ್ತಿದ್ದಾರೆ ಎಂದರು.</p>.<p>ರಾಜ್ಯ ಸರ್ಕಾರವು ಟಾಟಾ ಟೆಕ್ನಾಲಜಿ ಹಾಗೂ ಇತರೆ 20 ಉದ್ಯಮ ಪಾಲುದಾರರ ಸಹಯೋಗದೊಂದಿಗೆ ಜಿಲ್ಲೆಯ 6 ಐ.ಟಿ.ಐ.ಗಳ ಉನ್ನತೀಕರಣ ಮಾಡಿ ತಾಂತ್ರಿಕ ಚಟುವಟಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಿದೆ ಎಂದರು.</p>.<p>ಪ್ರತಿ ಕೇಂದ್ರಕ್ಕೆ ಅಂದಾಜು ₹30 ಕೋಟಿಯಂತೆ ಒಟ್ಟು ₹180 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪದವೀಧರರು ಸಹ ಈ ಕೇಂದ್ರದಲ್ಲಿ ತಾಂತ್ರಿಕ ತರಬೇತಿ ಪಡೆದು ಶ್ರಮವಹಿಸಿ ಕೆಲಸ ಮಾಡಿದರೆ ಹೊರ ದೇಶದಲ್ಲಿಯೂ ಸಹ ಉದ್ಯೋಗ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಿದರು.</p>.<p>ನಾನು ಪ್ರಾರಂಭದಲ್ಲಿ ಟಾಟಾ ಕಂಪನಿಯಲ್ಲಿ ₹9 ಸಾವಿರಕ್ಕೆ ಉದ್ಯೋಗ ಪ್ರಾರಂಭಿಸಿ, ಕಷ್ಟಪಟ್ಟು ಶ್ರಮವಹಿಸಿ ಕೆಲಸ ಮಾಡಿದ ಪರಿಣಾಮವಾಗಿ 2 ವರ್ಷದಲ್ಲಿ ಹೊರ ದೇಶಕ್ಕೆ ಹೋಗುವ ಅವಕಾಶ ಸಿಕ್ಕಿತು. ನೀವು ಸಹ ಸಿಕ್ಕಿರುವ ಕೆಲಸವನ್ನು ಕಡೆಗಣಿಸದೆ ಗೌರವದಿಂದ ಕಷ್ಟಪಟ್ಟು ಕೆಲಸ ಮಾಡಿ, ಉನ್ನತ ಸಾಧನೆ ಮಾಡಬಹುದು ಎಂದು ತಮ್ಮ ಜೀವನದ ಉದಾಹರಣೆ ನೀಡಿ ಉದ್ಯೋಗಾಕಾಂಕ್ಷಿಗಳನ್ನು ಹುರಿದುಂಬಿಸಿದರು.</p>.<p>ಬಿ.ಎಲ್.ಡಿ.ಇ.ಎ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಆರ್.ಬಿ. ಕೊಟ್ನಾಳ, ಉದ್ಯೋಗದಾತರು ಹೆಚ್ಚು ಹೆಚ್ಚು ಜನರಿಗೆ ಉದ್ಯೋಗ ಕೊಡಬೇಕು. ಅವರೇ ಮುಂದೆ ನಿಮ್ಮ ಆಸ್ತಿಯಾಗಬಹುದು ಎಂದು ಹೇಳಿದರು.</p>.<p>ಮೊಹಮ್ಮದ್ ಗೌಸ್, ಉದ್ಯೋಗಾಕಾಂಕ್ಷಿಗಳು ನಿಮಗೆ ಸಿಕ್ಕಿರುವ ಕೆಲಸದಲ್ಲಿ ನಿಮ್ಮ ಕೌಶಲವನ್ನು ತೋರಿಸಬೇಕು ಹಾಗೂ ಕಠಿಣ ಪರಿಶ್ರಮ ವಹಿಸಿ ಉತ್ತಮ ಕೆಲಸ ನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯ ದೊರೆಯುತ್ತವೆ ಎಂದು ಹೇಳಿದರು.</p>.<p>ಎಸ್. ಜೆ. ಗೌಡರ, ನೀವು ಯಾವ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ, ಅದೇ ಹುದ್ದೆಗೆ ಗೌರವ ಕೊಟ್ಟು ಶ್ರಮವಹಿಸಿ ಕಷ್ಟಪಟ್ಟು ಕೆಲಸ ಮಾಡಿದರೆ ಮುಂದೆ ಹೋಗಲು ಸಾಧ್ಯ ಎಂದು ಹೇಳಿದರು.</p>.<p>ಎಸ್. ಆರ್. ಬಿರಾದಾರ, ಸುನಂದಾ ಜಿ. ಬಾಲಪ್ಪನವರ, ದೇವೆಂದ್ರ ಧನಪಾಲ ಉಪಸ್ಥಿತರಿದ್ದರು.</p>.<p>****</p>.<p>ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಈ ಕಾಲಘಟ್ಟದಲ್ಲಿ ಕೇವಲ ಜ್ಞಾನ ಆಧಾರಿತ ಉದ್ಯೋಗಗಳ ಬದಲಿಗೆ ಕೌಶಲ ಆಧಾರಿತ ಉದ್ಯೋಗಗಳ ಬೇಡಿಕೆ ಹೆಚ್ಚುತ್ತಿದೆ<br />ರಮೇಶ ದೇಸಾಯಿ<br />ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ಇಂದಿನ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಒಂದು ಪದವಿ ಅಥವಾ ಒಂದು ಕೋರ್ಸ್ ಮುಗಿಸಿದರೆ ಸಾಲುವುದಿಲ್ಲ. ಕಾಲಮಾನದ ಅಪೇಕ್ಷೆಯಂತೆ ವೃತ್ತಿ ಕೌಶಲ ಪರಿಣಿತಿ ಹೊಂದಿದರೆ ಸುಲಭವಾಗಿ ಉದ್ಯೋಗಾವಕಾಶ ಪಡೆಯಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ ಹೇಳಿದರು.</p>.<p>ನಗರದ ಬಿ.ಎಲ್.ಡಿ.ಇ.ಎ ಎಸ್.ಎಸ್.ಎಂ. ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.</p>.<p>ನಮ್ಮ ಜಿಲ್ಲೆಯಲ್ಲಿ ಈವರೆಗೆ ಕೌಶಲಾಧಾರಿತ ಸಿಎಂಕೆಕೆವೈ ಮತ್ತು ಪಿಎಂಕೆವಿವೈ ಯೋಜನೆಗಳಲ್ಲಿ ವಿವಿಧ ವಲಯ ಮತ್ತು ಜಾಬ್ ರೋಲ್ಗಳಲ್ಲಿ 4500ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗ ದೊರಕಿಸಿಕೊಳ್ಳಲು ಸಹಾಯ ಹಸ್ತ ಚಾಚಲಾಗಿದೆ ಎಂದರು.</p>.<p>ಜಗತ್ತಿನಾದ್ಯಂತ ವೈಟ್ ಕಾಲರ್ ಜಾಬ್ಗಿಂತಲೂ ಕೌಶಲಾಧರಿತ ಬ್ಲ್ಯೂ ಕಾಲರ್ ಜಾಬ್ಗಳು ಹೆಚ್ಚು ಸೃಷ್ಟಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಯುವಸಮೂಹ ಯಾವುದೇ ಉದ್ಯೋಗ ಸಿಕ್ಕರೂ ಕೆಲಸ ಮಾಡಲು ಸಿದ್ಧರಾಗಿ, ವೃತ್ತಿ ನೈಪುಣ್ಯತೆ ಪಡೆದುಕೊಂಡು ಮುಂದಿನ ದಿನಗಳಲ್ಲಿ ಉನ್ನತ ಉದ್ಯೋಗ ಹೊಂದಲು ಈ ವೇದಿಕೆ ನೆರವಾಗುತ್ತದೆ ಎಂದು ಅವರು ಹೇಳಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್, ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿಯು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಯುವ ಜನರ ಆಶಾ ಕಿರಣವಾಗಿದೆ. ಈಗಾಗಲೇ ಹಲವಾರು ತರಬೇತಿ ಕೇಂದ್ರಗಳು ನೋಂದಣಿಯಾಗಿದ್ದು, ವಿವಿಧ ಜಾಬ್ ರೋಲ್ಗಳಲ್ಲಿ ತರಬೇತಿಗಳನ್ನು ನೀಡುತ್ತಿದ್ದಾರೆ ಎಂದರು.</p>.<p>ರಾಜ್ಯ ಸರ್ಕಾರವು ಟಾಟಾ ಟೆಕ್ನಾಲಜಿ ಹಾಗೂ ಇತರೆ 20 ಉದ್ಯಮ ಪಾಲುದಾರರ ಸಹಯೋಗದೊಂದಿಗೆ ಜಿಲ್ಲೆಯ 6 ಐ.ಟಿ.ಐ.ಗಳ ಉನ್ನತೀಕರಣ ಮಾಡಿ ತಾಂತ್ರಿಕ ಚಟುವಟಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಿದೆ ಎಂದರು.</p>.<p>ಪ್ರತಿ ಕೇಂದ್ರಕ್ಕೆ ಅಂದಾಜು ₹30 ಕೋಟಿಯಂತೆ ಒಟ್ಟು ₹180 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪದವೀಧರರು ಸಹ ಈ ಕೇಂದ್ರದಲ್ಲಿ ತಾಂತ್ರಿಕ ತರಬೇತಿ ಪಡೆದು ಶ್ರಮವಹಿಸಿ ಕೆಲಸ ಮಾಡಿದರೆ ಹೊರ ದೇಶದಲ್ಲಿಯೂ ಸಹ ಉದ್ಯೋಗ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಿದರು.</p>.<p>ನಾನು ಪ್ರಾರಂಭದಲ್ಲಿ ಟಾಟಾ ಕಂಪನಿಯಲ್ಲಿ ₹9 ಸಾವಿರಕ್ಕೆ ಉದ್ಯೋಗ ಪ್ರಾರಂಭಿಸಿ, ಕಷ್ಟಪಟ್ಟು ಶ್ರಮವಹಿಸಿ ಕೆಲಸ ಮಾಡಿದ ಪರಿಣಾಮವಾಗಿ 2 ವರ್ಷದಲ್ಲಿ ಹೊರ ದೇಶಕ್ಕೆ ಹೋಗುವ ಅವಕಾಶ ಸಿಕ್ಕಿತು. ನೀವು ಸಹ ಸಿಕ್ಕಿರುವ ಕೆಲಸವನ್ನು ಕಡೆಗಣಿಸದೆ ಗೌರವದಿಂದ ಕಷ್ಟಪಟ್ಟು ಕೆಲಸ ಮಾಡಿ, ಉನ್ನತ ಸಾಧನೆ ಮಾಡಬಹುದು ಎಂದು ತಮ್ಮ ಜೀವನದ ಉದಾಹರಣೆ ನೀಡಿ ಉದ್ಯೋಗಾಕಾಂಕ್ಷಿಗಳನ್ನು ಹುರಿದುಂಬಿಸಿದರು.</p>.<p>ಬಿ.ಎಲ್.ಡಿ.ಇ.ಎ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಆರ್.ಬಿ. ಕೊಟ್ನಾಳ, ಉದ್ಯೋಗದಾತರು ಹೆಚ್ಚು ಹೆಚ್ಚು ಜನರಿಗೆ ಉದ್ಯೋಗ ಕೊಡಬೇಕು. ಅವರೇ ಮುಂದೆ ನಿಮ್ಮ ಆಸ್ತಿಯಾಗಬಹುದು ಎಂದು ಹೇಳಿದರು.</p>.<p>ಮೊಹಮ್ಮದ್ ಗೌಸ್, ಉದ್ಯೋಗಾಕಾಂಕ್ಷಿಗಳು ನಿಮಗೆ ಸಿಕ್ಕಿರುವ ಕೆಲಸದಲ್ಲಿ ನಿಮ್ಮ ಕೌಶಲವನ್ನು ತೋರಿಸಬೇಕು ಹಾಗೂ ಕಠಿಣ ಪರಿಶ್ರಮ ವಹಿಸಿ ಉತ್ತಮ ಕೆಲಸ ನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯ ದೊರೆಯುತ್ತವೆ ಎಂದು ಹೇಳಿದರು.</p>.<p>ಎಸ್. ಜೆ. ಗೌಡರ, ನೀವು ಯಾವ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ, ಅದೇ ಹುದ್ದೆಗೆ ಗೌರವ ಕೊಟ್ಟು ಶ್ರಮವಹಿಸಿ ಕಷ್ಟಪಟ್ಟು ಕೆಲಸ ಮಾಡಿದರೆ ಮುಂದೆ ಹೋಗಲು ಸಾಧ್ಯ ಎಂದು ಹೇಳಿದರು.</p>.<p>ಎಸ್. ಆರ್. ಬಿರಾದಾರ, ಸುನಂದಾ ಜಿ. ಬಾಲಪ್ಪನವರ, ದೇವೆಂದ್ರ ಧನಪಾಲ ಉಪಸ್ಥಿತರಿದ್ದರು.</p>.<p>****</p>.<p>ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಈ ಕಾಲಘಟ್ಟದಲ್ಲಿ ಕೇವಲ ಜ್ಞಾನ ಆಧಾರಿತ ಉದ್ಯೋಗಗಳ ಬದಲಿಗೆ ಕೌಶಲ ಆಧಾರಿತ ಉದ್ಯೋಗಗಳ ಬೇಡಿಕೆ ಹೆಚ್ಚುತ್ತಿದೆ<br />ರಮೇಶ ದೇಸಾಯಿ<br />ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>