‘ಬಲಗಾಲಿನ ನರಗಳು ಕಾರ್ಯನಿರ್ವಹಿಸದೇ ನಡೆಯಲು ಅಸಹಾಯಕಳಾದೆ. ನಂತರದ ದಿನಗಳಲ್ಲಿ ಕೊಂಚ ಆರೋಗ್ಯ ಸುಧಾರಿಸಿತು. ಗದಗ ಡಿಜಿಎಮ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಸಿಕ್ಕಿತು. ವೈದ್ಯಕೀಯ ಶಿಕ್ಷಣದ 4 ವರ್ಷ ಸುಗಮವಾಗಿತ್ತು. ಇಂಟರ್ನ್ಶಿಪ್ ಸಮಯದಲ್ಲಿ ಮತ್ತೇ ಗಡ್ಡೆ ಕಾಣಿಸಿ ಎರಡು ಬಾರಿ ಶಸ್ತ್ರಕ್ರಿಯೆಗೆ ಒಳಗಾದೆ. ಇದೇ ಸಂದರ್ಭದಲ್ಲಿ ನೀಟ್ ಪರೀಕ್ಷೆ ತೇರ್ಗಡೆ ಹೊಂದಿ, ಬೆಂಗಳೂರಿನ ಸರ್ಕಾರಿ ಆಯುರ್ವೇದ್ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ ಅಧ್ಯಯನಕ್ಕೆ ಪ್ರವೇಶ ಪಡೆದೆ. ಈ ಸಂದರ್ಭದಲ್ಲಿ ಮತ್ತೇ ಶಸ್ತ್ರಚಿಕಿತೆಗೆ ಒಳಗಾದೆ ಇದು ನನ್ನ 6ನೇ ಶಸ್ತ್ರಚಿಕಿತ್ಸೆ!...ಎನ್ನುತ್ತಾರೆ ಅವರು.