ವಿಜಯಪುರ: ಟ್ರ್ಯಾಕ್ಟರ್, ಟ್ರೇಲರ್ ಮತ್ತು ಬೈಕ್ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಂದಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿಂದಗಿ ತಾಲ್ಲೂಕಿನಗುತ್ತರಗಿ ಗ್ರಾಮದ ಹುಸೇನ್ ನದಾಫ(24), ಸಮೀರ್ ನದಾಫ(20), ರವಿಕುಮಾರ ಮಾದರ(24), ಪೈಗಂಬರ್ ನದಾಫ(20) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಅಂದಾಜು ₹ 14.93 ಲಕ್ಷ ಮೌಲ್ಯದ 8ಟ್ರೇಲರ್, ಒಂದು ಬೈಕ್, ಎರಡು ಟ್ರ್ಯಾಕ್ಟರ್ ಎಂಜಿನ್ ವಶಪಡಿಸಿಕೊಂಡಿದ್ದಾರೆ.
ಇಂಡಿ ಉಪವಿಭಾಗದ ಪ್ರಭಾರ ಡಿ.ಎಸ್.ಪಿ. ಟಿ.ಎಸ್. ಸುಲ್ಪಿನೇತೃತ್ವದಲ್ಲಿ ಸಿಂದಗಿ ಸರ್ಕಲ್ ಸತೀಶಕುಮಾರ ಎಸ್. ಕಾಂಬಳೆ, ಪಿ.ಎಸ್.ಐ. ಎಸ್.ಎಚ್. ಹೊಸಮನಿ, ಸಿಬ್ಬಂದಿಗಳಾದ ಎಸ್.ಎನ್.ಸಂಕದ, ಎಂ.ಜಿ.ಪಾಟೀಲ. ಎಚ್.ಎಸ್. ಬಗಲಿ, ಎಸ್.ಪಿ.ಹುಣಸಿಕಟ್ಟಿ, ಜಿ.ಸಿ.ಪಾಟೀಲ, ಬಿ.ಎಲ್.ಪಟೇದ, ಎಸ್.ಎಂ. ಬತ್ತಗೌಡರ, ವೈ.ಕೆ.ಉಕಮನಾಳ, ಆರ್.ಎಲ್.ಕಟ್ಟಿಮನಿ, ಎ.ಕೆ.ಮಾಳಾಬಾ, ಜಿ.ಎಂ. ಕೊಟ್ಯಾಳ, ವಿ.ಆರ್.ರಾಠೋಡ, ಎಸ್.ಕೆ.ಯಳಸಂಗಿ, ಎಸ್.ಆರ್.ಚವ್ಹಾಣ ನೇತೃತ್ವದ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.