ಕಲ್ಯಾಣದ ಶರಣರಲ್ಲಿ ಒಂದು ಗಟ್ಟಿ ನಿಲುವಿತ್ತು, ಕಲ್ಯಾಣಕ್ಕೆ ಬಂದವರೆಲ್ಲ ನಮ್ಮವರು, ಅವರು ಶರಣರು ಎಂದರು. ಹೀಗಾಗಿ ಅಲ್ಲಿರುವವರೆಲ್ಲ 770ಅಮರ ಗಣಂಗಳಾದರು. ಇಲ್ಲಿ ಬಸವಣ್ಣನವರು, ಬರಿಯ ಬಾಯಿ ಮಾತಿನಿಂದ ಕಲ್ಯಾಣವನ್ನು ಕಟ್ಟಲಿಲ್ಲ. ಅಲ್ಲಿ ಪ್ರತಿಯೊಬ್ಬರದು ನುಡಿದದ್ದೇ ನಡೆಯಾಗಿತ್ತು. ಎಲ್ಲರದೂ ಒಂದೇ ಮಾರ್ಗವಾಗಿತ್ತು. ತಮ್ಮ ಜವಾಬ್ದಾರಿಯನ್ನು ಒಂದೆಳೆಯೂ ವ್ಯತ್ಯಾಸವಾಗದಂತ ನಿಭಾಯಿಸಿ ಬದುಕಿನ ಸಾರ್ಥಕತೆ ಮೆರೆದ ಶರಣರಲ್ಲಿ ಹಡಪದ ಅಪ್ಪಣ್ಣನವರು ಪ್ರಮುಖರು.