ವಿಜಯಪುರ: ನಗರದ ಬಿಎಲ್ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವೈದ್ಯರ ತಂಡವು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಪ್ರವಾಹ ಪೀಡಿತ ಜನರಿಗೆ ಚಿಕಿತ್ಸೆ ನೀಡಿ, ಔಷಧ ವಿತರಿಸಿದರು.
ಡಾ.ಎಸ್.ಎಸ್.ನಾಗಠಾಣ ನೇತೃತ್ವದ ತಂಡವು ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮಗಳಲ್ಲಿ ಸಂಚರಿಸಿ, ತಪಾಸಣೆ ಕೈಗೊಂಡರು. 300ಜನರಿಗೆ ಚಿಕಿತ್ಸೆ ನೀಡಿ, ಔಷಧ ವಿತರಿಸಿದರು.