ಇಂಡಿ(ವಿಜಯಪುರ): ಇಂಡಿ ಪಟ್ಟಣದ ದೇಶಪಾಂಡೆ ತಾಂಡಾದಲ್ಲಿ ಮಂಗಳವಾರ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಸಾವನಪ್ಪಿದ್ದಾರೆ.
ದೇಶಪಾಂಡೆ ತಾಂಡಾದ ಅಮೀತ್ ಬಾಳು ರಾಠೋಡ (12), ಸುದೀಪ್ ಜಾಧವ್ (13) ಸಾವಿಗೀಡಾದ ಬಾಲಕರು ಎಂದು ಗುರುತಿಸಲಾಗಿದೆ.
ಬಾಲಕರು ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.