<p><strong>ವಿಜಯಪುರ: </strong>ನಗರ ಹೊರ ವಲಯದ ಇಟ್ಟಂಗಿಹಾಳದಲ್ಲಿ ಇತ್ತೀಚೆಗೆ ನಡೆದಿದ್ದ ರೌಡಿಶೀಟರ್ ದಸ್ತಗಿರಸಾಬ್ ಮಮದಾಪುರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದರು.</p>.<p>ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ಪಣ್ಣಗೌಡ ಬಾಗಾಯತ, ಸಂತೋಷ ರಾಠೋಡ, ಶ್ಯಾಮರಾಯ ರಾಠೋಡ, ವಿಲಾಸ ರಾಠೋಡ, ಸಂತೋಷ ಚವ್ಹಾಣ ಬಂಧಿತ ಆರೋಪಿಗಗಳಾಗಿದ್ದಾರೆ ಎಂದರು.</p>.<p>ಆರೋಪಿ ಅಪ್ಪಣ್ಣಗೌಡನ ಹೆಂಡತಿ ಜೊತೆಗೆ ದಸ್ತಗಿರ ಅನೈತಿಕ ಸಂಬಂಧ ಹೊಂದಿರುವುದೇ ಕೊಲೆಗೆ ಕಾರಣವಾಗಿದೆ ಎಂದು ತಿಳಿಸಿದರು.</p>.<p>ಕೊಲೆಗೆ ಬಳಸಿದ್ದ ಒಂದು ಚಾಕು, ಒಂದು ಸ್ಕೂಟರ್ ಹಾಗೂ ₹2400 ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.</p>.<p class="Subhead">ದರೋಡೆಕೋರರ ಬಂಧನ:</p>.<p>ಉತ್ನಾಳ ಕ್ರಾಸ್ ಹತ್ತಿರ ದ್ರಾಕ್ಷಿ ತರಲು ಹೊರಟಿದ್ದ ವೇಳೆಯಲ್ಲಿ ವಾಹನಕ್ಕೆ ಕಾರನ್ನು ಅಡ್ಡಗಟ್ಟಿ ದರೋಡೆ ನಡೆಸಿದ್ದ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅಗರವಾಲ್ ತಿಳಿಸಿದರು.</p>.<p>ಆರೋಪಿಗಳಾದ ಮಲ್ಲಿಕಾರ್ಜುನ ಪಾಟೀಲ, ಪ್ರಶಾಂತ ಕೆಂಪವಾಡ, ಸುನೀಲ ವಳಸಂಗ, ಅರುಣ ಜಾಧವ, ವಿಜಯಕುಮಾರ ಮುತ್ತಗಿ, ರವಿ ಬೈರವಾಡಗಿ ಬಂಧಿಸಿ, ಅವರಿಂದ ಎರಡು ಕಾರು, 6 ಮೊಬೈಲ್, ₹ 1.20 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.</p>.<p>ಕಳೆದ ಏಪ್ರಿಲ್ 7 ರಂದು ಉತ್ನಾಳ ಹತ್ತಿರ ಅಕ್ರಂಪಾಶ ಬಾಬು ಲಾಲ್ ಹಾಗೂ ಮಹ್ಮದ ತಬರಿಜ್ ಎಂಬುವರ ವಾಹನಕ್ಕೆ ಅಡ್ಡಗಟ್ಟಿ ₹3.50 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ನಗರ ಹೊರ ವಲಯದ ಇಟ್ಟಂಗಿಹಾಳದಲ್ಲಿ ಇತ್ತೀಚೆಗೆ ನಡೆದಿದ್ದ ರೌಡಿಶೀಟರ್ ದಸ್ತಗಿರಸಾಬ್ ಮಮದಾಪುರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದರು.</p>.<p>ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ಪಣ್ಣಗೌಡ ಬಾಗಾಯತ, ಸಂತೋಷ ರಾಠೋಡ, ಶ್ಯಾಮರಾಯ ರಾಠೋಡ, ವಿಲಾಸ ರಾಠೋಡ, ಸಂತೋಷ ಚವ್ಹಾಣ ಬಂಧಿತ ಆರೋಪಿಗಗಳಾಗಿದ್ದಾರೆ ಎಂದರು.</p>.<p>ಆರೋಪಿ ಅಪ್ಪಣ್ಣಗೌಡನ ಹೆಂಡತಿ ಜೊತೆಗೆ ದಸ್ತಗಿರ ಅನೈತಿಕ ಸಂಬಂಧ ಹೊಂದಿರುವುದೇ ಕೊಲೆಗೆ ಕಾರಣವಾಗಿದೆ ಎಂದು ತಿಳಿಸಿದರು.</p>.<p>ಕೊಲೆಗೆ ಬಳಸಿದ್ದ ಒಂದು ಚಾಕು, ಒಂದು ಸ್ಕೂಟರ್ ಹಾಗೂ ₹2400 ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.</p>.<p class="Subhead">ದರೋಡೆಕೋರರ ಬಂಧನ:</p>.<p>ಉತ್ನಾಳ ಕ್ರಾಸ್ ಹತ್ತಿರ ದ್ರಾಕ್ಷಿ ತರಲು ಹೊರಟಿದ್ದ ವೇಳೆಯಲ್ಲಿ ವಾಹನಕ್ಕೆ ಕಾರನ್ನು ಅಡ್ಡಗಟ್ಟಿ ದರೋಡೆ ನಡೆಸಿದ್ದ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅಗರವಾಲ್ ತಿಳಿಸಿದರು.</p>.<p>ಆರೋಪಿಗಳಾದ ಮಲ್ಲಿಕಾರ್ಜುನ ಪಾಟೀಲ, ಪ್ರಶಾಂತ ಕೆಂಪವಾಡ, ಸುನೀಲ ವಳಸಂಗ, ಅರುಣ ಜಾಧವ, ವಿಜಯಕುಮಾರ ಮುತ್ತಗಿ, ರವಿ ಬೈರವಾಡಗಿ ಬಂಧಿಸಿ, ಅವರಿಂದ ಎರಡು ಕಾರು, 6 ಮೊಬೈಲ್, ₹ 1.20 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.</p>.<p>ಕಳೆದ ಏಪ್ರಿಲ್ 7 ರಂದು ಉತ್ನಾಳ ಹತ್ತಿರ ಅಕ್ರಂಪಾಶ ಬಾಬು ಲಾಲ್ ಹಾಗೂ ಮಹ್ಮದ ತಬರಿಜ್ ಎಂಬುವರ ವಾಹನಕ್ಕೆ ಅಡ್ಡಗಟ್ಟಿ ₹3.50 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>