<p><strong>ಆಲಮೇಲ</strong>: ತಾಲ್ಲೂಕಿನ ಕಡಣಿ ಗ್ರಾಮದ ಭೀಮಾನದಿಗೆ ಅಡ್ಡಲಾಗಿ ಸಂಪರ್ಕ ಸೇತುವಾಗಿದ್ದ ಕಡಣಿ ಬ್ಯಾರೇಜ್ ಮುಳುಗಡೆಯಾಗಿ ಹಲವು ವರ್ಷಗಳೇ ಕಳೆದಿವೆ. ಸೊನ್ನ ಸಮೀಪ ಭೀಮಾ ಏತನೀರಾವರಿ ಯೋಜನೆಯಿಂದಾಗಿ ಭೀಮಾ ಹಿನ್ನೀರು ಪರಿಣಾಮ ಈ ಸೇತುವೆ ಮುಳಗಡೆಯಾಗಿದೆ. ಹೀಗಾಗಿ ಮಹಾರಾಷ್ಟ್ರದ ಅಕ್ಕಲಕೋಟ ಹಾಗೂ ನೆರೆಯ ಕಲಬುರಗಿ ಜಿಲ್ಲೆಯ ಸಂಪರ್ಕಕ್ಕೆ ಇರುವ ಕೊಂಡಿಯೊಂದು ಕಳಚಿದಂತಾಗಿದೆ.</p>.<p>ಕಳೆದ ಒಂದು ದಶಕದಿಂದ ಈ ವಿಷಯ ಪ್ರಸ್ತಾಪದಲ್ಲಿದ್ದು, ಬ್ಯಾರೇಜ್ ನಿರ್ಮಾಣದ ಕಾರ್ಯ ಮಾತ್ರ ಕೈಗೂಡುತ್ತಿಲ್ಲ. 2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಉಸ್ತುವಾರಿ ಸಚಿವರಾಗಿದ್ದ ಎಂ.ಸಿ. ಮನಗೂಳಿ ವಿಶೇಷ ಆಸಕ್ತಿಯಿಂದಾಗಿ ಬಜೆಟ್ನಲ್ಲಿ ₹53 ಕೋಟಿ ನಿಗದಿಪಡಿಸಿ ಘೋಷಣೆ ಮಾಡಿಸಿದ್ದರು. ಅದಕ್ಕೂ ಮೊದಲು ನಡೆದ ಚುನಾವಣೆಯಲ್ಲೂ ಇದು ಪ್ರಮುಖ ವಿಷಯವಾಗಿ ಚಾಲ್ತಿಯಲ್ಲಿತ್ತು.</p>.<p><strong>ಏನು ಲಾಭ:</strong></p>.<p>ಈ ಬ್ಯಾರೇಜ್ ನಿರ್ಮಾಣ ಮಾಡುವುದರಿಂದ ನೆರೆಯ ಮಹಾರಾಷ್ಟ್ರದ ಸಂಪರ್ಕದ ಅಂತರ ಕಡಿಮೆಯಾಗಿ ವ್ಯಾಪಾರ ವಹಿವಾಟಿಗೆ ಹೆಚ್ಚು ಸಹಕಾರಿಯಾಗಲಿದೆ. ಎರಡೂ ರಾಜ್ಯಗಳ ಜನರೊಂದಿಗೆ ಉತ್ತಮ ಬಾಂಧವ್ಯ ಹೆಚ್ಚಿಸಲಿದೆ.</p>.<p>ಆಲಮೇಲದಿಂದ ಮಹಾರಾಷ್ಟ್ರದ ಅಕ್ಕಲಕೋಟ ಪಟ್ಟಣಕ್ಕೆ ಈಗಿರುವ ದೂರ 70 ಕಿ.ಮೀದಿಂದ 40 ಕಿ.ಮೀಗೆ ಇಳಿಯುತ್ತದೆ. ಅಫಜಲಪುರದಿಂದ ಹೋಗಬೇಕಾದ ಅನಿವಾರ್ಯತೆ ಇಲ್ಲವಾಗಿ ಆಲಮೇಲ ಕಡಣಿ ಕರಜಗಿ ಮಾರ್ಗವಾಗಿ ಅಕ್ಕಲಕೋಟ ತಲುಪಬಹುದು. ಇದರಿಂದ ಪ್ರಯಾಣದ ಸಮಯ ಹಾಗೂ ಹಣದ ಉಳಿತಾಯ ಆಗುತ್ತದೆ. ಸರಕು ಸರಂಜಾಮು ಹೊತ್ತು ತರುವ ಬೃಹತ್ ವಾಹನಗಳಿಗೆ ದುಪ್ಪಟ್ಟು ಲಾಭ ಆಗಲಿದೆ ಎಂಬುದು ಲೆಕ್ಕಾಚಾರ.</p>.<p>ರೈತರಿಗೆ ಹೆಚ್ಚು ಪ್ರಯೋಜನವಾಗಲಿದ್ದು, ಈ ಭಾಗದ ರೈತರಿಗೆ ಕೃಷಿ ವ್ಯವಹಾರಕ್ಕೆ ಉತ್ತೇಜನವಾಗುತ್ತದೆ. ಆಲಮೇಲ ಕಡಣಿ ರಸ್ತೆಯಲ್ಲಿರುವ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವುದಕ್ಕೆ ನೆರೆಯ ಕಲಬುರಗಿ ಜಿಲ್ಲೆಯ ರೈತರಿಗೂ ಇದರಿಂದ ಸಹಕಾರಿ ಆಗಲಿದೆ. ಅಲ್ಲದೇ ಇಲ್ಲಿಯ ರೈತರು ಅಕ್ಕಲಕೋಟ ಹಾಗೂ ಸೊಲಾಪುರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ತುಂಬಾ ಸಹಕಾರಿಯಾಗುತ್ತದೆ. ಸ್ಥಳೀಯ ವ್ಯಾಪಾರ ವಹಿವಾಟು ವೃದ್ಧಿಯಾಗುತ್ತದೆ.</p>.<p><strong>ಹೋರಾಟ</strong>, <strong>ಭರವಸೆ</strong>:</p>.<p>1970ರ ಕಾಲದಲ್ಲಿ ಭೀಮಾ ನದಿಗೆ ಅಡ್ಡಲಾಗಿ ಕಡಣಿ ಸೇತುವೆ ನಿರ್ಮಾಣವಾಗಿದ್ದು, ಇದು ಬ್ರಿಡ್ಜ್ ಕಂ ಬ್ಯಾರೇಜ್ ಆಗಿದ್ದರಿಂದ ಸಂಪರ್ಕ ಮತ್ತು ಭೀಮೆಯ ನೀರು ತಡೆದು ಸಂಗ್ರಹಿಸಲಾಗುತ್ತಿತ್ತು. ಕಾಲಘಟ್ಟದಿಂದಾಗಿ ಹೊಸ ಯೋಜನೆಗಳು ರೂಪುಗೊಂಡು ದೇವಣಗಾಂವ ಸನಿಹದಲ್ಲಿ ಭೀಮಾ ಏತನೀರಾವರಿ ಸಲುವಾಗಿ ಬೃಹತ್ ಸೇತುವೆ ನಿರ್ಮಾಣವಾದ ಕಾರಣ ಈ ಸೇತುವೆ ಹಿನ್ನೀರಿನಲ್ಲಿ ಮುಳುಗುವಂತಾಯಿತು.</p>.<p>ಪ್ರತಿ ವರ್ಷ ಬೇಸಿಗೆಯಲ್ಲಿ ನೀರು ಬರಿದಾದಾಗ ಮಾತ್ರ ಈ ಬ್ಯಾರೇಜು ಕಾಣುತ್ತದೆ. ಸಂಪರ್ಕಕ್ಕೆ ವಾಹನಗಳ ಓಡಾಟಕ್ಕೆ ಉಪಯೋಗಕ್ಕೆ ಬರುವುದು ಈಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಈ ಸೇತುವೆ ಎತ್ತರಿಸಬೇಕು ಅಥವಾ ಪಕ್ಕದಲ್ಲೇ ಬ್ಯಾರೇಜ್ ನಿರ್ಮಮಿಸಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ. ಅದು ದಶಕದ ಬೇಡಿಕೆಯೂ ಆಗಿದೆ.</p>.<p>ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರೂ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಶಾಸಕರಾಗಿ ಆಯ್ಕೆಯಾದ ಅಶೋಕ ಮನಗೂಳಿ ಅವರು ತಮ್ಮ ತಂದೆಯವರ ಸಂಕಲ್ಪವೂ ಇದಾಗಿದ್ದು, ಇದನ್ನು ಮಾಡಿಯೇ ಮುಂದಿನ ಚುನಾವಣೆ ಎದುರಿಸುವ ಮಾತುಗಳನ್ನು ಆಡಿದ್ದಾರೆ.ಶ್ರೀಮಂತ ದುದ್ದಗಿ ಅಧ್ಯಕ್ಷ ಜಿಲ್ಲಾ ಕಬ್ಬು ಬೆಳೆಗಾರರ ಸಂಘ</p>.<div><blockquote>ಕಡಣಿ ಬ್ಯಾರೇಜ್ ನಿರ್ಮಾಣಕ್ಕೆ ಎಲ್ಲ ಪ್ರಕ್ರಿಯೆ ಮುಗಿಸಿಕೊಂಡು ಕಾಮಗಾರಿ ಆರಂಭಿಸುವ ಹಂತದಲ್ಲಿದೆ. ಬ್ಯಾರೇಜ್ ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ಮಾಡಲಾಗುವುದು. </blockquote><span class="attribution">ಸಿಂದಗಿ ಅಶೋಕ ಎಂ. ಮನಗೂಳಿ ಶಾಸಕ </span></div>.<div><blockquote>ಕಡಣಿ ಬ್ಯಾರೇಜ್ ನಿರ್ಮಾಣ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ನಿರ್ಮಾಣವಾದರೆ ರೈತರಿಗೂ ಹೆಚ್ಚು ಲಾಭವಾಗಲಿದೆ. ಮುಂದಿನ ದಿನಗಳಲ್ಲಿ ಹೋರಾಟ ಅವಶ್ಯವಾದಲ್ಲಿ ಅದಕ್ಕೂ ಸಿದ್ಧ </blockquote><span class="attribution"> ಶ್ರೀಮಂತ ದುದ್ದಗಿ ಅಧ್ಯಕ್ಷ ಜಿಲ್ಲಾ ಕಬ್ಬು ಬೆಳೆಗಾರರ ಸಂಘ</span></div>
<p><strong>ಆಲಮೇಲ</strong>: ತಾಲ್ಲೂಕಿನ ಕಡಣಿ ಗ್ರಾಮದ ಭೀಮಾನದಿಗೆ ಅಡ್ಡಲಾಗಿ ಸಂಪರ್ಕ ಸೇತುವಾಗಿದ್ದ ಕಡಣಿ ಬ್ಯಾರೇಜ್ ಮುಳುಗಡೆಯಾಗಿ ಹಲವು ವರ್ಷಗಳೇ ಕಳೆದಿವೆ. ಸೊನ್ನ ಸಮೀಪ ಭೀಮಾ ಏತನೀರಾವರಿ ಯೋಜನೆಯಿಂದಾಗಿ ಭೀಮಾ ಹಿನ್ನೀರು ಪರಿಣಾಮ ಈ ಸೇತುವೆ ಮುಳಗಡೆಯಾಗಿದೆ. ಹೀಗಾಗಿ ಮಹಾರಾಷ್ಟ್ರದ ಅಕ್ಕಲಕೋಟ ಹಾಗೂ ನೆರೆಯ ಕಲಬುರಗಿ ಜಿಲ್ಲೆಯ ಸಂಪರ್ಕಕ್ಕೆ ಇರುವ ಕೊಂಡಿಯೊಂದು ಕಳಚಿದಂತಾಗಿದೆ.</p>.<p>ಕಳೆದ ಒಂದು ದಶಕದಿಂದ ಈ ವಿಷಯ ಪ್ರಸ್ತಾಪದಲ್ಲಿದ್ದು, ಬ್ಯಾರೇಜ್ ನಿರ್ಮಾಣದ ಕಾರ್ಯ ಮಾತ್ರ ಕೈಗೂಡುತ್ತಿಲ್ಲ. 2018ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಉಸ್ತುವಾರಿ ಸಚಿವರಾಗಿದ್ದ ಎಂ.ಸಿ. ಮನಗೂಳಿ ವಿಶೇಷ ಆಸಕ್ತಿಯಿಂದಾಗಿ ಬಜೆಟ್ನಲ್ಲಿ ₹53 ಕೋಟಿ ನಿಗದಿಪಡಿಸಿ ಘೋಷಣೆ ಮಾಡಿಸಿದ್ದರು. ಅದಕ್ಕೂ ಮೊದಲು ನಡೆದ ಚುನಾವಣೆಯಲ್ಲೂ ಇದು ಪ್ರಮುಖ ವಿಷಯವಾಗಿ ಚಾಲ್ತಿಯಲ್ಲಿತ್ತು.</p>.<p><strong>ಏನು ಲಾಭ:</strong></p>.<p>ಈ ಬ್ಯಾರೇಜ್ ನಿರ್ಮಾಣ ಮಾಡುವುದರಿಂದ ನೆರೆಯ ಮಹಾರಾಷ್ಟ್ರದ ಸಂಪರ್ಕದ ಅಂತರ ಕಡಿಮೆಯಾಗಿ ವ್ಯಾಪಾರ ವಹಿವಾಟಿಗೆ ಹೆಚ್ಚು ಸಹಕಾರಿಯಾಗಲಿದೆ. ಎರಡೂ ರಾಜ್ಯಗಳ ಜನರೊಂದಿಗೆ ಉತ್ತಮ ಬಾಂಧವ್ಯ ಹೆಚ್ಚಿಸಲಿದೆ.</p>.<p>ಆಲಮೇಲದಿಂದ ಮಹಾರಾಷ್ಟ್ರದ ಅಕ್ಕಲಕೋಟ ಪಟ್ಟಣಕ್ಕೆ ಈಗಿರುವ ದೂರ 70 ಕಿ.ಮೀದಿಂದ 40 ಕಿ.ಮೀಗೆ ಇಳಿಯುತ್ತದೆ. ಅಫಜಲಪುರದಿಂದ ಹೋಗಬೇಕಾದ ಅನಿವಾರ್ಯತೆ ಇಲ್ಲವಾಗಿ ಆಲಮೇಲ ಕಡಣಿ ಕರಜಗಿ ಮಾರ್ಗವಾಗಿ ಅಕ್ಕಲಕೋಟ ತಲುಪಬಹುದು. ಇದರಿಂದ ಪ್ರಯಾಣದ ಸಮಯ ಹಾಗೂ ಹಣದ ಉಳಿತಾಯ ಆಗುತ್ತದೆ. ಸರಕು ಸರಂಜಾಮು ಹೊತ್ತು ತರುವ ಬೃಹತ್ ವಾಹನಗಳಿಗೆ ದುಪ್ಪಟ್ಟು ಲಾಭ ಆಗಲಿದೆ ಎಂಬುದು ಲೆಕ್ಕಾಚಾರ.</p>.<p>ರೈತರಿಗೆ ಹೆಚ್ಚು ಪ್ರಯೋಜನವಾಗಲಿದ್ದು, ಈ ಭಾಗದ ರೈತರಿಗೆ ಕೃಷಿ ವ್ಯವಹಾರಕ್ಕೆ ಉತ್ತೇಜನವಾಗುತ್ತದೆ. ಆಲಮೇಲ ಕಡಣಿ ರಸ್ತೆಯಲ್ಲಿರುವ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವುದಕ್ಕೆ ನೆರೆಯ ಕಲಬುರಗಿ ಜಿಲ್ಲೆಯ ರೈತರಿಗೂ ಇದರಿಂದ ಸಹಕಾರಿ ಆಗಲಿದೆ. ಅಲ್ಲದೇ ಇಲ್ಲಿಯ ರೈತರು ಅಕ್ಕಲಕೋಟ ಹಾಗೂ ಸೊಲಾಪುರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ತುಂಬಾ ಸಹಕಾರಿಯಾಗುತ್ತದೆ. ಸ್ಥಳೀಯ ವ್ಯಾಪಾರ ವಹಿವಾಟು ವೃದ್ಧಿಯಾಗುತ್ತದೆ.</p>.<p><strong>ಹೋರಾಟ</strong>, <strong>ಭರವಸೆ</strong>:</p>.<p>1970ರ ಕಾಲದಲ್ಲಿ ಭೀಮಾ ನದಿಗೆ ಅಡ್ಡಲಾಗಿ ಕಡಣಿ ಸೇತುವೆ ನಿರ್ಮಾಣವಾಗಿದ್ದು, ಇದು ಬ್ರಿಡ್ಜ್ ಕಂ ಬ್ಯಾರೇಜ್ ಆಗಿದ್ದರಿಂದ ಸಂಪರ್ಕ ಮತ್ತು ಭೀಮೆಯ ನೀರು ತಡೆದು ಸಂಗ್ರಹಿಸಲಾಗುತ್ತಿತ್ತು. ಕಾಲಘಟ್ಟದಿಂದಾಗಿ ಹೊಸ ಯೋಜನೆಗಳು ರೂಪುಗೊಂಡು ದೇವಣಗಾಂವ ಸನಿಹದಲ್ಲಿ ಭೀಮಾ ಏತನೀರಾವರಿ ಸಲುವಾಗಿ ಬೃಹತ್ ಸೇತುವೆ ನಿರ್ಮಾಣವಾದ ಕಾರಣ ಈ ಸೇತುವೆ ಹಿನ್ನೀರಿನಲ್ಲಿ ಮುಳುಗುವಂತಾಯಿತು.</p>.<p>ಪ್ರತಿ ವರ್ಷ ಬೇಸಿಗೆಯಲ್ಲಿ ನೀರು ಬರಿದಾದಾಗ ಮಾತ್ರ ಈ ಬ್ಯಾರೇಜು ಕಾಣುತ್ತದೆ. ಸಂಪರ್ಕಕ್ಕೆ ವಾಹನಗಳ ಓಡಾಟಕ್ಕೆ ಉಪಯೋಗಕ್ಕೆ ಬರುವುದು ಈಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಈ ಸೇತುವೆ ಎತ್ತರಿಸಬೇಕು ಅಥವಾ ಪಕ್ಕದಲ್ಲೇ ಬ್ಯಾರೇಜ್ ನಿರ್ಮಮಿಸಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ. ಅದು ದಶಕದ ಬೇಡಿಕೆಯೂ ಆಗಿದೆ.</p>.<p>ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರೂ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಶಾಸಕರಾಗಿ ಆಯ್ಕೆಯಾದ ಅಶೋಕ ಮನಗೂಳಿ ಅವರು ತಮ್ಮ ತಂದೆಯವರ ಸಂಕಲ್ಪವೂ ಇದಾಗಿದ್ದು, ಇದನ್ನು ಮಾಡಿಯೇ ಮುಂದಿನ ಚುನಾವಣೆ ಎದುರಿಸುವ ಮಾತುಗಳನ್ನು ಆಡಿದ್ದಾರೆ.ಶ್ರೀಮಂತ ದುದ್ದಗಿ ಅಧ್ಯಕ್ಷ ಜಿಲ್ಲಾ ಕಬ್ಬು ಬೆಳೆಗಾರರ ಸಂಘ</p>.<div><blockquote>ಕಡಣಿ ಬ್ಯಾರೇಜ್ ನಿರ್ಮಾಣಕ್ಕೆ ಎಲ್ಲ ಪ್ರಕ್ರಿಯೆ ಮುಗಿಸಿಕೊಂಡು ಕಾಮಗಾರಿ ಆರಂಭಿಸುವ ಹಂತದಲ್ಲಿದೆ. ಬ್ಯಾರೇಜ್ ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ಮಾಡಲಾಗುವುದು. </blockquote><span class="attribution">ಸಿಂದಗಿ ಅಶೋಕ ಎಂ. ಮನಗೂಳಿ ಶಾಸಕ </span></div>.<div><blockquote>ಕಡಣಿ ಬ್ಯಾರೇಜ್ ನಿರ್ಮಾಣ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ನಿರ್ಮಾಣವಾದರೆ ರೈತರಿಗೂ ಹೆಚ್ಚು ಲಾಭವಾಗಲಿದೆ. ಮುಂದಿನ ದಿನಗಳಲ್ಲಿ ಹೋರಾಟ ಅವಶ್ಯವಾದಲ್ಲಿ ಅದಕ್ಕೂ ಸಿದ್ಧ </blockquote><span class="attribution"> ಶ್ರೀಮಂತ ದುದ್ದಗಿ ಅಧ್ಯಕ್ಷ ಜಿಲ್ಲಾ ಕಬ್ಬು ಬೆಳೆಗಾರರ ಸಂಘ</span></div>