ವಿಜಯಪುರ: ಕಾರಜೋಳದ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಸ್ವಾತಿ ಗೌಡಪ್ಪ ಮಾಳೇದ ಅವರು ಎಸ್ಸೆಸ್ಸೆಲ್ಸಿಪರೀಕ್ಷೆಯಲ್ಲಿ 625 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಬಬಲೇಶ್ವರ ತಾಲ್ಲೂಕಿನ ಹಲಗಣಿಯ ರೈತ ಗೌಡಪ್ಪ ಮಾಳೇದ ಮತ್ತು ವಿಜಯಪುರ ನಗರದ ಚೇತನಾ ಕಾಲೇಜು ಹಾಸ್ಟೆಲ್ನ ವಾರ್ಡನ್ ಭಾಗ್ಯಶ್ರೀ ದಂಪತಿಯ ಪುತ್ರಿ ಸ್ವಾತಿ ಅವರು ಶಾಲೆಯ ಶಿಕ್ಷಕರ ಬೋಧನೆ ಹೊರತು ಯಾವುದೇ ಕೋಚಿಂಗ್ ಪಡೆಯದೇ ಈ ಸಾಧನೆ ಮಾಡಿದ್ದಾರೆ.
ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್ ಆಗಿರುವುದಕ್ಕೆ ಖುಷಿಯಾಗಿದೆ. ನನ್ನ ಈ ಸಾಧನೆಗೆ ಶಾಲೆಯ ಶಿಕ್ಷಕರ ಬೋಧನೆ, ಪೋಷಕರ ಪ್ರೋತ್ಸಾಹ ಕಾರಣ ಎಂದು ಹೇಳಿದರು.
ಪಿಯುಸಿಯಲ್ಲಿ ಸೈನ್ಸ್ ಓದಿ, ವೈದ್ಯೆಯಾಗಿಜನರ ಸೇವೆ ಮಾಡಬೇಕು ಎಂದುಕೊಂಡಿರುವೆ ಎಂದು ತಿಳಿಸಿದರು.