ಇಲ್ಲಿಯ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನ ಗಣ ಮನ ಬೆಸೆಯೋಣ ಯಾತ್ರೆಯ ಸಭೆಯಲ್ಲಿ ಮಾತನಾಡಿದ ಅವರು, ಈ ಯಾತ್ರೆ ಬಿಜೆಪಿ ಪ್ರಚಾರಕ್ಕಲ್ಲ. ಇದು ನನಗೋಸ್ಕರ, ನಮಗೋಸ್ಕರ ಯಾತ್ರೆ. ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಯುವಕರಲ್ಲಿ ಜನಜಾಗೃತಿ ಮೂಡಿಸುವ ಸದುದ್ದೇಶಕ್ಕಾಗಿರುವ ಯಾತ್ರೆಯಾಗಿದೆ. ದೇಶದ ರಾಜಕೀಯದಲ್ಲಿ ಆಗದವರೆಲ್ಲ ಒಟ್ಟಾಗಿ ಸೇರಿ ‘ಡಾಟ್ ಪಾರ್ಟಿ’ ಮಾಡಿಕೊಂಡು ದೇಶವನ್ನು ಚೂರು ಮಾಡಲು ಹೊರಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.