ವಿಜಯಪುರ: ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನದ 2019 ಮತ್ತು 2020ನೇ ಸಾಲಿನ ರಾಜ್ಯ ಸಾಹಿತ್ಯ ಪ್ರಶಸ್ತಿ ಪ್ರಕಟವಾಗಿರುವ ಬೆನ್ನಲ್ಲೇ ಸಾಹಿತ್ಯ ವಲಯದಿಂದ ಆಕ್ಷೇಪಗಳು ವ್ಯಕ್ತವಾಗಿವೆ. ಪ್ರಶಸ್ತಿ ಆಯ್ಕೆಗೆ ಯಾವುದೇ ಮಾನದಂಡವನ್ನು ಅನುಸರಿಸಿಲ್ಲ. ಅರ್ಜಿಆಹ್ವಾನಿಸದೇ, ಅರ್ಹರನ್ನು ಪರಿಗಣಿಸದೇ ತಮಗೆ ಬೇಕಾದವರಿಗೆ, ಪರಿಚಯಸ್ಥರಿಗೆ ಆಯ್ಕೆ ಸಮಿತಿಯವರು ಪ್ರಶಸ್ತಿ ನೀಡಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.