ಕೆಲಸವಿಲ್ಲ, ಗಳಿಕೆ ಇಲ್ಲ, ಊಟಕ್ಕೂ ತತ್ವಾರ, ಈಗಿರುವಲ್ಲಿ ಇರಲು ಆಗುತ್ತಿಲ್ಲ. ತಮ್ಮ ಸ್ವಂತ ಊರು ಗಳಿಗೆ ಹಿಂತಿರುಗಿ ಹೋಗಲು ಕೈಯಲ್ಲಿ ಹಣವಿಲ್ಲ. ಸಾರಿಗೆ ವ್ಯವಸ್ಥೆ ಇಲ್ಲ. ಇದರಿಂದ ಕಂಗಾಲಾದ ಕಾರ್ಮಿಕರು ಹಸಿದ ಹೊಟ್ಟೆಯಲ್ಲಿ ತಮ್ಮೂರಿನತ್ತ ಕಾಲ್ನಡಿಗೆಯಲ್ಲಿ ಹೊರಟವರಲ್ಲಿ ನೂರಾರು ಜನ ಈಗಾಗಲೇ ದಾರುಣವಾಗಿ ಅಸುನೀಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗ಼ಳು ರೈಲು ಮತ್ತು ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.